More

    ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರೋ ಕೇಜ್ರಿವಾಲ್​ ಪತ್ನಿ ಸುನೀತಾ ಆಪ್​ ಗೆಲುವಿನ ಬಗ್ಗೆ ಹೇಳಿದ್ದೇನು?

    ನವದೆಹಲಿ: ಸತತ ಮೂರನೇ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯ ಸಿಎಂ ಗಾದಿಯನ್ನೇರಲು ಅರವಿಂದ್​ ಕೇಜ್ರಿವಾಲ್ ಸಿದ್ಧರಾಗಿದ್ದಾರೆ.​ ಆಮ್​ ಆದ್ಮಿ ಪಕ್ಷವು ಗೆಲುವಿನ ಸಮೀಪದಲ್ಲಿರುವ ಬೆನ್ನಲ್ಲೇ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕೇಜ್ರಿವಾಲ್​ ಪತ್ನಿ ಸುನೀತಾ ಅವರು ಇದಕ್ಕಿಂತ ಬಹುದೊಡ್ಡ ಉಡುಗೊರೆ ಇನ್ನೊಂದಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಈವರೆಗೂ ಸ್ವೀಕರಿಸಿದ್ದರಲ್ಲಿ ಇದೇ ಬಹುದೊಡ್ಡ ಉಡುಗೊರೆ. ಇದು ಸತ್ಯದ ಜಯವಾಗಿದೆ. ಸಮಸ್ಯೆಗಳ ಆಧಾರದ ಮೇಲೆ ರಾಜಕೀಯ ಮಾಡಬೇಕು. ಅವಹೇಳನಕಾರಿಯಂತಹ ಕಮೆಂಟ್​ಗಳನ್ನು ಮಾಡಬಾರದು ಎಂಬುದನ್ನು ರಾಜಕೀಯ ಪಕ್ಷಗಳು ದೆಹಲಿ ಚುನಾವಣಾ ಫಲಿತಾಂಶ ನೋಡಿ ಕಲಿಯಬೇಕು ಎಂದರು.

    ಇದೇ ವೇಳೆ ಮಾತನಾಡಿದ ಕೇಜ್ರಿವಾಲ್​, ಇಂದು ನನ್ನ ಪತ್ನಿಯ ಹುಟ್ಟುಹಬ್ಬ. ನಾನು ಕೇಕ್​ ತಂದಿದ್ದೇನೆ. ನಿಮ್ಮೊಂದಿಗೆ ಎಲ್ಲವನ್ನು ಹಂಚಿಕೊಳ್ಳಲಿದ್ದೇನೆ ಎಂದು ಗೆಲುವಿನ ಖಷಿಯಲ್ಲಿ ಹೇಳಿದರು.

    ಇನ್ನು ಚುನಾವಣಾ ಫಲಿತಾಂಶಕ್ಕೆ ಬರುವುದಾರೆ, ಒಟ್ಟು 70 ಸ್ಥಾನಗಳಲ್ಲಿ ಈಗಾಗಲೇ 38 ಸ್ಥಾನಗಳಲ್ಲಿ ಗೆಲವು ಸಾಧಿಸಿರುವ ಆಪ್​ ಉಳಿದ 24 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ ಮೂರು ಸ್ಥಾನಗಳಲ್ಲಿ ವಿಜಯೋತ್ಸವ ಆಚರಿಸಿದ್ದು, 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಉಳಿದಂತೆ ಕಾಂಗ್ರೆಸ್​ ಖಾತೆ ತೆರೆಯುವಲ್ಲಿ ವಿಫಲವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts