ವಿಜಯನಗರ: ಅಂಗಡಿಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಬಾಲಕಿಯೊಬ್ಬಳು ಸೇರಿ ಇಬ್ಬರು ಜೀವಂತ ದಹನಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತಾಯಕನಾಯಕನ ಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ. ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದ ಕೃಷ್ಣಮೂರ್ತಿ (30) ಹಾಗೂ ಅವರ ಅಕ್ಕನ ಮಗಳು ಭೂಮಿಕಾ (11) ವರ್ಷ ಜೀವಂತ ದಹನಗೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸ್ಫೋಟದ ತೀವ್ರತೆಗೆ ಇಬ್ಬರ ದೇಹವೂ ಸುಟ್ಟು ಕರಕಲಾಗಿದೆ.
ಕೃಷ್ಣಮೂರ್ತಿ ಅವರು ಗೂಡಂಗಡಿಯಲ್ಲಿ ಇಂದು ಸಂಜೆ ಚಹಾ ಮಾಡುತ್ತಿದ್ದಾಗ, ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ, ಇಡೀ ಅಂಗಡಿಗೆ ಒಮ್ಮೆಲೇ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳೀಯರು ನೀರನ್ನು ಎರಚಿ ಆರಿಸಲು ಪ್ರಯತ್ನಪಟ್ಟರೂ ಅವರಿಬ್ಬರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಕಾನಾಹೊಸಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕರ್ನಾಟಕದಲ್ಲಿ ಆರು ತಿಂಗಳಲ್ಲೇ ಕರೊನಾ ಅಲೆ ಅಬ್ಬರ ಅಧಿಕ: ಇಂದು ಒಂದೇ ದಿನ 46 ಜನ ಸಾವು!
ಬಿದ್ದಿದ್ದು ಒಂದೇ ಒಂದು ಬೇವಿನ ಮರ, ಉರುಳಿದ್ದು 12 ವಿದ್ಯುತ್ ಕಂಬಗಳು!