ದೀನದಯಾಳರ ಜಯಂತ್ಯುತ್ಸವ
ಗಂಗಾವತಿ: ತ್ಯಾಗದ ಮೂಲಕ ಬಿಜೆಪಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿಸಿಕೊಟ್ಟ ಪಂ.ದೀನದಯಾಳ್ ಉಪಾಧ್ಯಯರು ಆದರ್ಶಗಳು ರಾಜಕೀಯ ಜೀವನದಲ್ಲಿ ಅಗತ್ಯವಿದೆ ಎಂದು ಶಾಸಕ ಪರಣ್ಣಮುನವಳ್ಳಿ ಹೇಳಿದರು.
ಬಂಡಿ ಬಸಪ್ಪ ಕ್ಯಾಂಪ್ ಬಸವೇಶ್ವರ ದೇವಾಲಯದ ಬಳಿ ಬಿಜೆಪಿ ಗ್ರಾಮೀಣ ಘಟಕದಿಂದ ಶನಿವಾರ ಆಯೋಜಿಸಿದ್ದ ಪಂ.ದೀನದಯಾಳ್ ಉಪಾಧ್ಯಾಯರ 105ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಪರೋಪಕಾರಿ ಚಟುವಟಿಕೆಗಳ ಮೂಲಕ ಪಕ್ಷವನ್ನು ಉನ್ನತ ಮಟ್ಟಕ್ಕೇರಿಸಿದ ಕೀತಿ ಉಪಾಧ್ಯಾಯರಿಗೆ ಸಲ್ಲುತ್ತದೆ ಎಂದರು.