ಮುಂಬೈ: ಸೌತ್ ಸಿನಿ ಇಂಡಸ್ಟ್ರಿಯ ಸಿನಿಮಾಗಳ ಎದುರು ಸಸತ ವೈಫಲ್ಯ ಕಂಡು ನಲುಗಿದ್ದ ಬಾಲಿವುಡ್ಗೆ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರವು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿತ್ತು.
ಬಾಲಿವುಡ್ ಚಿತ್ರಗಳ ಸತತ ವೈಫಲ್ಯ ಕುರಿತು ಮೌನ ಮುರಿದಿರುವ ಸಲ್ಮಾನ್ ಖಾನ್ ಇದನ್ನು ನಾನು ಬಹಳ ಹಿಂದಿನಿಂದ ಹೇಳುತ್ತಿದ್ದೇನೆ ಗಲತ್ ಪಿಚ್ಚರ್ ಬನಾವೋಗೆ ತೋ ಕೈಸಾ ಚಲೇಗಾ. ನಾನು ಹೊಸ ಹೊಸ ನಿರ್ಧೇಶಕರು ಹಾಗೂ ನಿರ್ಮಾಪಕರನ್ನು ಭೇಟಿ ಮಾಡಿದ್ದೇನೆ ಅವರು ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದನ್ನು ನಾನು ನೋಡಿಲ್ಲ.
ಇದನ್ನೂ ಓದಿ: Covid 19; ರಾಜ್ಯಗಳಿಗೆ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸೂಚನೆ
ಕೆಲವರು ಚಿತ್ರ ಮಾಡಬೇಕಾದರೆ ಮುಘಲ್-ಇ-ಆಜಾಮ್ ಅಥವಾ ಹಮ್ ಆಪ್ ಕೇ ಕೌನ್ ಮಾಡುತ್ತಿರುವುದಾಗಿ ಭಾವಿಸುತ್ತಾರೆ. ಆದರೆ, ನಿಜವಾಗಿಯೂ ಅದು ಆಗುತ್ತಿಲ್ಲ. ಇದರ ಬಗ್ಗೆ ನಾವು ಹೆಚ್ಚಿನ ಗಮನ ಕೊಡಬೇಕಿದೆ ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್ ನಟನೆಯ ಕಿಸೀ ಕಾ ಭಾಯ್ ಕಿಸೀ ಕಿ ಜಾನ್ ಚಿತ್ರವು ರಂಜಾನ್ ಹಬ್ಬದ ಪ್ರಯುಕ್ತ ಏಪ್ರಿಲ್ 21 ರಂದು ವಿಶ್ವದಾದ್ಯಂತ ತೆರೆ ಕಾಣುತ್ತಿದೆ.