ಮಂಗಳೂರು: ಮೃತನ ಅಂತ್ಯಸಂಸ್ಕಾರ ನೆರವೇರಿಸಿದ ಬೆನ್ನಲ್ಲೇ ಆತನ ಮೃತದೇಹ ವೆನ್ ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯಕ್ಷವಾಗಿದೆ!
ಜಾಂಡೀಸ್ ಖಾಯಿಲೆಯಿಂದ ಆ.19ರಂದು ಇಲ್ಲಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಉಳಾಯಿಬೆಟ್ಟು ನಿವಾಸಿ ವಿನೋದ್ ಮೃತಪಟ್ಟಿದ್ದರು. ವಿನೋದ್ ಅನಾಥರಾಗಿರುವ ಕಾರಣ ಆ ದಿನವೇ ಸ್ಥಳೀಯರು ಆತನ ಅಂತ್ಯಕ್ರಿಯೆ ನೆರವೇರಿಸಿದ್ದರು. ಸತ್ತ ವ್ಯಕ್ತಿ ಸುಟ್ಟು ಬೂದಿಯಾದ ಮರುದಿನವೇ ಆಸ್ಪತ್ರೆ ಸಿಬ್ಬಂದಿ ಮತ್ತೆ ಫೋನ್ ಕಾಲ್ ಮಾಡಿ, ‘ನಿಮ್ಮವರ ಮೃತದೇಹ ತೆಗೆದುಕೊಂಡು ಹೋಗಿ’ ಎಂದರೆ ಹೇಗಾಗಬೇಡ ಇದನ್ನೂ ಓದಿರಿ ಗಂಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಂದು ಪೊಲೀಸ್ ಠಾಣೆಗೆ ಬಂದ ಪತ್ನಿ, ಕಾರಣ ಹೀಗಿದೆ
ವಿನೋದ್ ಅಂತ್ಯಕ್ರಿಯೆ ಮುಗಿದ ಬಳಿಕ ಅಂದರೆ ಆ.20 ಮತ್ತು 21 ಎರಡೂ ದಿನ ವಿನೋದ್ನ ಪರಿಚಯಸ್ಥರಿಗೆ ಪದೇಪದೆ ಕರೆ ಮಾಡಿದ ಆಸ್ಪತ್ರೆ ಸಿಬ್ಬಂದಿ, 4 ಸಾವಿರ ಕಟ್ಟಿ ಹಣ ಕಟ್ಟಿ ವಿನೋದ್ ಶವ ತೆಗೆದುಕೊಂಡು ಹೋಗಿ ಎಂದಿದ್ದಾರೆ. ಅಂತ್ಯಸಂಸ್ಕಾರ ನಡೆದರೂ ಮತ್ತೆ ಅದೇ ಹೆಸರಿನಲ್ಲಿ ಮತ್ತೊಂದು ಶವ ತೆಗೆದುಕೊಂಡು ಹೋಗಲು ದುಂಬಾಲು ಬಿದ್ದ ಆಸ್ಪತ್ರೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಕನ್ನಡ ಕಿರುತೆರೆ ನಟಿಗೆ ವರದಕ್ಷಿಣೆ ಕಿರುಕುಳ, ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ