More

    ವಿನಯ್ ಕುಲಕರ್ಣಿ ಬಂಧನಕ್ಕೆ ಕಾಂಗ್ರೆಸ್ ಪ್ರತಿಭಟನೆ

    ಶಿಕಾರಿಪುರ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸುಳ್ಳು ಆರೋಪದಡಿ ಸಿಬಿಐ ಬಂಧಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಮಾತನಾಡಿ, ವಿಪಕ್ಷ ನಾಯಕರ ವಿರುದ್ಧ ಸುಳ್ಳು ದಾವೆಗಳನ್ನು ಹೂಡಿ ಅವರ ಆತ್ಮಬಲ ಕುಗ್ಗಿಸುವ ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಬೆದರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ವಿನಯ್ ಕುಲಕರ್ಣಿ ಬೆಳೆಯುತ್ತಿರುವ ಲಿಂಗಾಯತ ವೀರಶೈವ ಸಮಾಜದ ನಾಯಕ. ಆದರೆ ಅವರ ಬೆಳವಣಿಗೆ ಸಹಿಸದವರು ಈ ರೀತಿಯ ತಂತ್ರ ಹೆಣೆದಿದ್ದಾರೆ ಎಂದು ದೂರಿದರು.

    ಅಧಿಕಾರ ಶಾಶ್ವತವಲ್ಲ. ಸಿಬಿಐ, ಇಡಿ ಮುಂತಾದವುಗಳನ್ನು ಅನಗತ್ಯವಾಗಿ ಬಳಸಿಕೊಂಡು ಕಾಂಗ್ರೆಸ್ ನಾಯಕರನ್ನು ಮೂಲೆಗುಂಪು ಮಾಡುವ ಹುನ್ನಾರ ನಡೆದಿದೆ. ಕಾಂಗ್ರೆಸ್​ಗೆ ನೂರಾರು ವರ್ಷಗಳ ಸುದೀರ್ಘ ಇತಿಹಾಸವಿದೆ. ಅದನ್ನು ಮುಗಿಸಲು ಎಂದಿಗೂ ಸಾಧ್ಯವಿಲ್ಲ. ಕೂಡಲೇ ವಿನಯ್ ಕುಲಕರ್ಣಿ ಅವರನ್ನು ಬಿಡುಗಡೆ ಮಾಡುವಂತೆ ರಾಜ್ಯಪಾಲರು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಆಗ್ರಹಿಸಿದರು.

    ಯುವ ಕಾಂಗ್ರೆಸ್ ಅಧ್ಯಕ್ಷ ಉಳ್ಳಿ ದರ್ಶನ್, ಪುರಸಭೆ ಸದಸ್ಯ ಹುಲ್ಮಾರ್ ಮಹೇಶ್, ಪಾರಿವಾಳದ ಶಿವರಾಂ, ರವೀಂದ್ರ, ಧಾರವಾಡ ಸುರೇಶ್, ತಿಮ್ಮಣ್ಣ, ಹುಲ್ಮಾರ್ ಶಿವು, ಜಿದ್ದು ಮಂಜುನಾಥ್, ಖಬೂತರ್, ಶ್ರೀಕಾಂತ್, ಚೇತನ್, ಹಾಲೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts