More

    ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಬಸವಣ್ಣನ ಐಕ್ಯ ಸ್ಥಳಕ್ಕೆ ಭೇಟಿ

    ಕೂಡಲಸಂಗಮ : ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸೋಮವಾರ ಸುಕ್ಷೇತ್ರ ಕೂಡಲಸಂಗಮಕ್ಕೆ ಆಗಮಿಸಿ ಕ್ಷೇತ್ರಾಧಿಪತಿ ಸಂಗಮನಾಥನ ದರ್ಶನ ಪಡೆದರು.

    ನಂತರ ಬಸವಣ್ಣ ಐಕ್ಯ ಮಂಟಪಕ್ಕೆ ತೆರಳಿ ಕೃಷ್ಣಾ, ಮಲಪ್ರಭಾ ನದಿಯ ವಿಹಂಗಮ ದೃಶ್ಯ ನೋಡಿ ಆನಂದ ಪಟ್ಟರು. ಐಕ್ಯ ಮಂಟಪ ಮೇಲ್ಭಾಗದಿಂದಲೇ ಬಸವಣ್ಣನ ಐಕ್ಯ ಸ್ಥಳದ ದರ್ಶನ ಪಡೆದರು.

    ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಕೂಡಲಸಂಗಮ ಪಿಕೆಪಿಎಸ್ ಅಧ್ಯಕ್ಷ ಶೇಖರಗೌಡ ಗೌಡರ, ಮುಖಂಡರಾದ ಗಂಗಣ್ಣ ಬಾಗೇವಾಡಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡಮನಿ ಇತರರಿದ್ದರು. ಗ್ರಾಮಸ್ಥರು ವೀರಪ್ಪ ಮೊಯ್ಲಿ ಅವರನ್ನು ಸನ್ಮಾನಿಸಿದರು.

    ಬಸವ ಕಲಾನಿಕೇತನದ ಬಸವ ಕಲಾ ಸಂಗ್ರಹಾಲಯಕ್ಕೂ ಭೇಟಿ ನೀಡಿ, ಅಲ್ಲಿಯ ಕಲಾ ಚಟುವಟಿಕೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಲಾವಿದ ಬಸವರಾಜ ಅನಗವಾಡಿ ಸಾಧನೆ ಶ್ಲಾಘನೀಯ. ಇಂಥ ಕಲಾವಿದರ ಪ್ರಯತ್ನದಿಂದಲೇ ಐತಿಹಾಸಿಕ, ಸಾಹಿತ್ಯಿಕ ನೆಲೆಗಳನ್ನು ಗುರುತಿಸಲು ಸಾಧ್ಯವಾಗುತ್ತಿದೆ. ಅವರ ಕೆಲಸ, ಕಾರ್ಯಗಳಿಗೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಮೊಯ್ಲಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts