More

    ಯುವ ರಾಜಕಾರಣಿಗಳಿಗೆ ಅಂಗಡಿ ಮಾದರಿ – ಪ್ರಭಾಕರ ಕೋರೆ

    ಬೆಳಗಾವಿ: ನಾಯಕರಿಗೆ ನೀಡುವ ಸಮಯವನ್ನು ಸಾಮಾನ್ಯ ಕಾರ್ಯಾಕರ್ತರಿಗೂ ನೀಡುತ್ತಿದ್ದ ಸುರೇಶ ಅಂಗಡಿ ಅವರು ಮಾನವೀಯ ಗುಣಗಳಿಂದ ಜನರ ಗಮನ ಸೆಳೆದಿದ್ದರು. ಯುವ ರಾಜಕಾರಣಿಗಳಿಗೆ ಅವರ ಮಾರ್ಗದರ್ಶಿಯಾಗಿದ್ದರು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.

    ನಗರದ ಸಂತಮೀರಾ ಪ್ರೌಢಶಾಲೆ ಸಭಾಂಗಣದಲ್ಲಿ ಬೆಳಗಾವಿ ಮಹಾನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇತೃತ್ವದಲ್ಲಿ ಸಂಘದ ವಿವಿಧ ಆಯಾಮಗಳಾದ ವಿಶ್ವಹಿಂದು ಪರಿಷತ್, ಬಜರಂಗ ದಳ, ಎಬಿವಿಪಿ, ರಾಷ್ಟ್ರ ಸೇವಿಕಾ ಸಮಿತಿ, ಉದ್ಯೋಗ ಭಾರತಿ, ವಿದ್ಯಾಭಾರತಿ, ಭಾರತೀಯ ಜನತಾ ಪಾರ್ಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

    ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷಕ್ಕೆ ಕಾಲಿಟ್ಟು, ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದ ಸುರೇಶ ಅಂಗಡಿ ನಿಜಕ್ಕೂ ಮಾದರಿ ವ್ಯಕ್ತಿ ಎಂದರು. ವಿಧಾನಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಸಂಜಯ ಪಾಟೀಲ ಸಭೆಯಲ್ಲಿ ಮಾತನಾಡಿದರು. ಶ್ರದ್ಧಾ ಶೆಟ್ಟರ್, ಸಂಕಲ್ಪ ಶೆಟ್ಟರ್, ರಾಹುಲ ಪಾಟೀಲ, ಪರಮೇಶ್ವರ ಹೆಗಡೆ, ಬಾಳಣ್ಣ ಕಗ್ಗಣಗಿ, ಸಚಿನ ಸಬನಿಸ, ಪೃಥ್ವಿ ಕುಮಾರ, ಡಾ.ಬಾಗೋಜಿ, ರಾಘವೇಂದ್ರ ಕಾಗವಾಡ, ಪಕ್ಷದ ಕಾರ್ಯಕರ್ತರು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts