More

    ತಿರಂಗಾ ಹಾರಿಸಿ ರಾಷ್ಟ್ರಭಕ್ತಿ ಇಮ್ಮಡಿಗೊಳಿಸಿ

    ರೋಣ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆ. 13ರಿಂದ 15ರವರೆಗೆ ದೇಶಾದ್ಯಂತ ಪ್ರತಿಯೊಬ್ಬರ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿ ರಾಷ್ಟ್ರಭಕ್ತಿಯನ್ನು ಇಮ್ಮಡಿಗೊಳಿಸಲು ಮನೆ ಮನೆಗೆ ತಿರಂಗಾ ಅಭಿಯಾನ ಆಯೋಜಿಸಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ರಾಜಣ್ಣಾ ಹೂಲಿ ಹೇಳಿದರು.
    ರೋಣ ಪಟ್ಟಣದಲ್ಲಿ ಬಿಜೆಪಿ ಯುವ ಘಟಕದಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
    ಕೈಮಗ್ಗ, ಪಾಲಿಸ್ಟರ್, ಉಣ್ಣೆ ಮತ್ತು ಖಾದಿಯಲ್ಲಿ ತಯಾರಿಸಿದ ರಾಷ್ಟ್ರಧ್ವಜವನ್ನು ಜನರು ತಮ್ಮ ಮನೆಯ ಮೇಲೆ ಹಾರಿಸಬಹುದು ಎಂದು ಹೇಳಿದರು. ಮುತ್ತಣ್ಣಾ ಕಡಗದ, ಅಶೋಕ ನವಲಗುಂದ, ಬಸವರಾಜ ಕೊಟಗಿ, ಅನೀಲ ಪಲ್ಲೇದ, ಎಸ್.ಬಿ. ಜಿಡ್ಡಿಬಾಗಿಲ ಇದ್ದರು.
    ಸಾಧು ಅಜ್ಜನ ಮಠದಿಂದ ಸೂಡಿ ವೃತ್ತ, ಮುಲ್ಲಾನಭಾವಿ ವೃತ್ತ, ಬಸ್ ನಿಲ್ದಾಣ ವೃತ್ತ, ತಹಸೀಲ್ದಾರ ಕಚೇರಿ ಮಾರ್ಗವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts