More

    ಒಂದು ಹಂತ ಮುಗಿಸಿದ ‘ಮರ್ಧನಿ‌’; ಮಾರ್ಚ್​​ನಲ್ಲಿ ಮತ್ತೆ ಚಿತ್ರೀಕರಣ

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅದೆಷ್ಟು ಹೊಸಬರು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳುವುದಕ್ಕೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೋ ಹೇಳುವುದು ಕಷ್ಟ. ಆ ಸಾಲಿಗೆ ಇದೀಗ ಅಕ್ಷಯ್​ ಸಹ ಸೇರಿಕೊಂಡಿದ್ದಾರೆ.

    ಇದನ್ನೂ ಓದಿ: ಮತ್ತೆ ಭೂಗತ ಲೋಕದತ್ತ ಹೊರಳಿದ ಆರ್​ಜಿವಿ: ಐದು ಭಾಷೆಗಳಲ್ಲಿ ಬರಲಿದೆ ‘ಡಿ ಕಂಪನಿ‘ ಚಿತ್ರ

    ಹೋಟೆಲ್ ಮ್ಯಾನೆಜ್‌ಮೆಂಟ್​ನಲ್ಲಿ ಗೋಲ್ಡ್ ಮೆಡಲ್, ಕರಾಟೆಯಲ್ಲಿ‌ ಬ್ಲ್ಯಾಕ್ ‌ಬೆಲ್ಟ್ ಹಾಗೂ ಗೋಲ್ಡ್ ಮೆಡಲ್ ಪಡೆದಿರುವ ಅಕ್ಷಯ್, ಬಾಲಿವುಡ್​ನ ಖ್ಯಾತ ನಿರ್ದೇಶಕ ರಾಜಕುಮಾರ್ ಸಂತೋಷಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇದೀಗ ಅವರು ‘ಮರ್ಧಿನಿ’ ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜತೆಗೆ ಹೀರೋ ಆಗಿದ್ದಾರೆ.

    ಅಂಕಿತ ಫಿಲಂಸ್ ಲಾಂಛನದಲ್ಲಿ ಭಾರತಿ ಜಗ್ಗಿ ನಿರ್ಮಿಸುತ್ತಿರುವ ಈ ‘ಮರ್ಧನಿ’ ಚಿತ್ರಕ್ಕೆ ಈಗಾಗಲೇ ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನಲ್ಲಿ ಹತ್ತು ದಿನಗಳ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನೂ ಇಪ್ಪತ್ತೈದು ದಿನಗಳ ಚಿತ್ರೀಕರಣ ಬಾಕಿಯಿದ್ದು, ಮಾರ್ಚ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

    ಹಿಂದೆ ಪ್ರಥಮ್​ ಅಭಿನಯದ ‘ದೇವರಂಥ ಮನುಷ್ಯ’ ನಿರ್ದೇಶಿಸಿದ್ದ ಕಿರಣ್‌ ಕುಮಾರ್ ವಿ‌ ಈ ಚಿತ್ರದ ನಿರ್ದೇಶಕರು. ಅಕ್ಷಯ್​ ಜತೆಗೆ ಹಿತನ್ ಗೌಡ, ಮನೋಹರ್, ಭಾಗ್ಯಲಕ್ಷ್ಮೀ ಗೌಡ, ಮೈಸೂರು ಮಾಲತಿ, ಮಧು, ಸಂತೋಷ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ ನಾಯಿಯೊಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವುದು ವಿಶೇಷ.

    ಇದನ್ನೂ ಓದಿ: ‘ನಿಮ್ಮೂರು’ ಚಿತ್ರದ ಆಡಿಯೋ ಬಿಡುಗಡೆ: ಹೊಸಬರ ಚಿತ್ರಕ್ಕೆ ಚಿನ್ನೇಗೌಡ್ರು ಸಾಥ್

    ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಹಿತನ್ ಹಾಸನ್ ಸಂಗೀತ ನೀಡುತ್ತಿದ್ದಾರೆ. ಶಿವಸಾಗರ್ ಛಾಯಾಗ್ರಹಣ, ಎಂ.ಎನ್.ವಿಶ್ವ ಸಂಕಲನ ಈ ಚಿತ್ರಕ್ಕಿದೆ.

    ಪ್ರಾಣಿಗಳ ಉಳಿವಿಗೆ ಝುೂ, ಸಫಾರಿ ತ್ಯಜಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts