More

    ಪ್ರಾಣಿಗಳ ಉಳಿವಿಗೆ ಝುೂ, ಸಫಾರಿ ತ್ಯಜಿಸಿ

    ಬೆಂಗಳೂರು: ತಮಿಳಿನಾಡಿನಲ್ಲಿ ಕೆಲ ಕಿಡಿಗೇಡಿಗಳು ಆನೆಗೆ ಬೆಂಕಿ ಹಚ್ಚಿದ ಕೃತ್ಯ ರಾಷ್ಟ್ರವ್ಯಾಪಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಕಿಡಿಗೇಡಿಗಳಿಗೆ ಘೋರ ಶಿಕ್ಷೆ ವಿಧಿಸುವಂತೆಯೂ ನೆಟ್ಟಿಗರು ತಮ್ಮ ಆಕ್ರೋಶ ಹೊರಹಾಕಿದ್ದರು. ಇದೀಗ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ತಮ್ಮೊಳಗಿನ ಅಸಮಾಧಾನವನ್ನು ಸೋಷಿಯಲ್ ಮೀಡಿಯಾದಲ್ಲಿ ತೋಡಿಕೊಂಡಿದ್ದಾರೆ.

    ‘ಯಾಕೆ ನಾವುಗಳು ಇಷ್ಟೊಂದು ಕ್ರೂರಿಗಳಾಗುತ್ತಿದ್ದೇವೆ, ನಮ್ಮೊಳಗಿನ ಕರುಣೆ ಎಲ್ಲಿ ಹೋಗಿದೆ. ನಮ್ಮಂತೆ ಪ್ರತಿಯೊಂದು ಜೀವಿಗೂ ಭೂಮಿಯ ಮೇಲೆ ಬದುಕುವ ಹಕ್ಕಿದೆ. ಹೀಗಿರುವಾಗ ಶಾಂತಿಯುತವಾಗಿ ಬಾಳಬೇಕೆಂಬುದನ್ನು ನಾವು ಅರಿಯುವುದು ಯಾವಾಗ? ನಿಮಗೆ ಪ್ರಾಣಿಗಳೆಂದರೆ ಇಷ್ಟವಾ, ಹಾಗಾದರೆ ಅವುಗಳನ್ನು ಅದರ ಪಾಡಿಗೆ ಬಿಟ್ಟುಬಿಡಿ.

    ಝುೂ ಅಥವಾ ಅರಣ್ಯಕ್ಕೆ ಸಫಾರಿಗೆಂದು ಹೋಗುವುದು ಬೇಡ. ಅವುಗಳ ಜಾಗಕ್ಕೆ ಈಗಾಗಲೇ ನಾವು ಕಾಲಿಟ್ಟಾಗಿದೆ. ಹಾಗಾಗಿ ನಿಮ್ಮನ್ನು ನೀವೇ ಅರಿಯುವ ಕೆಲಸ ಮಾಡಿಕೊಳ್ಳಿ. ಸುತ್ತಾಡುವುದರಿಂದ, ಕಾಡು, ಬೆಟ್ಟ ಗುಡ್ಡ ಅಲೆದಾಡುವುದರಿಂದ ಶಾಂತತೆ ಸಿಗುವುದಿಲ್ಲ. ನಿಮ್ಮೊಳಗೆ ನೀವೇ ಅದನ್ನು ಕಂಡುಕೊಳ್ಳಬೇಕು’ ಎಂದು ಇತ್ತೀಚಿನ ಕೆಲ ಘಟನೆಗಳನ್ನು ಕಂಡು ಕಳವಳ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts