ಉಡುಪಿ: ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಹಾಗೂ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿ ವತಿಯಿಂದ ಮೀನು ಮಾರಾಟ ಮಾಡುವ ಮಹಿಳೆಯರನ್ನು ಸನ್ಮಾನಿಸುವ ಮೂಲಕ ಶನಿವಾರ ವಿಶ್ವ ಮಹಿಳಾ ದಿನ ಆಚರಿಸಲಾಯಿತು.
ಹಿರಿಯ ಮೀನು ಮಾರಾಟ ಮಹಿಳೆಯರಾದ ಬೇಬಿ ಸಾಲ್ಯಾನ್ ಕೊಡವೂರು, ಲಲಿತಾ ಅಮೀನ್ ಪಡುಕೆರೆ, ಸುಮತಿ ಬಂಗೇರ ಪಿತ್ರೋಡಿ ಸೇರಿದಂತೆ ಮಾರುಕಟ್ಟೆಯಲ್ಲಿ ದುಡಿಯುವ ಸುಮಾರು 100ಕ್ಕೂ ಅಧಿಕ ಮಹಿಳೆಯರನ್ನು ಗೌರವಿಸಲಾಯಿತು.
ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಉದ್ಯಮಿ ಅಮೃತ್ ಶೆಣೈ, ಉಡುಪಿ ತಾಲ್ಲೂಕು ಮಹಿಳಾ ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್ ಮಾತನಾಡಿದರು. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮೈಕಲ್ ಡಿಸೋಜ ಪ್ರಾಸ್ತಾವಿಸಿದರು. ಚರ್ಚ್ನ ಪಾಲನ ಮಂಡಳಿ ಉಪಾಧ್ಯಕ್ಷ ಮೆಲ್ವಿನ್ ನರೊನ್ಹ, ಐಸಿವೈಎಂ ಅಧ್ಯಕ್ಷ ರೋಯಲ್ ಕ್ಯಾಸ್ತಲಿನೋ, ಸಮಿತಿಯ ನಿರ್ದೇಶಕರಾದ ಏರಿಕ್ ಮೆನೇಜಸ್, ಟರೆಂನ್ಸ್ ಪಿರೇರಾ, ಜೆರಾಲ್ಡ್ ಪಿರೇರಾ, ರೋನಾಲ್ಡ್ ಡಿಸೋಜ, ಲೀನಾ ಮೆಂಡೋನ್ಸಾ ಉಪಸ್ಥಿತರಿದ್ದರು. ಸಮಿತಿ ಸಂಚಾಲಕ ಸ್ಟೀವನ್ ಕುಲಾಸೋ ನಿರೂಪಿಸಿದರು.