ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ರೈತರ ಹೋರಾಟ ಆರಂಭವಾಗಿ ನಾಳೆಗೆ ನೂರು ದಿನಗಳು ಪೂರೈಸುತ್ತವೆ. ಈ ಸಂದರ್ಭದಲ್ಲಿ ನವದೆಹಲಿಯ ಹೊರಗಿನ ಪ್ರಮುಖ ಎಕ್ಸ್ಪ್ರೆಸ್ವೇನಲ್ಲಿ ರಸ್ತೆ ತಡೆ ನಡೆಸುವ ನಿರ್ಧಾರವನ್ನು ರೈತನಾಯಕರು ತೆಗೆದುಕೊಂಡಿದ್ದಾರೆ.
ಸರ್ಕಾರದ ಗಮನ ಸೆಳೆಯಲು ಕುಂಡ್ಲಿ-ಮನೇಸರ್-ಪಲವಾಲ್(ಕೆಎಂಪಿ) ಎಕ್ಸ್ಪ್ರೆಸ್ವೇ ಎಂದೂ ಕರೆಯಲಾಗುವ ಸಿಕ್ಸ್-ಲೇನ್ ವೆಸ್ಟರ್ನ್ ಪೆರಿಫೆರಲ್ ಎಕ್ಸ್ಪ್ರೆಸ್ವೇನಲ್ಲಿ ಪ್ರತಿಭಟನಾಕಾರರು ಶನಿವಾರ (ಮಾರ್ಚ್ 6) ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ರಸ್ತೆ ತಡೆ ನಡೆಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ) ಘೋಷಿಸಿದೆ.
ಇದನ್ನೂ ಓದಿ: ಸಾಲಮನ್ನಾದಿಂದ ರೈತರ ಅಭಿವೃದ್ಧಿ ಅಸಾಧ್ಯ
ದೆಹಲಿ ಗಡಿಯಲ್ಲಿ ರೈತರ ಧರಣಿ ಪ್ರತಿಭಟನೆ ಆರಂಭವಾಗಿದ್ದು, ಕಳೆದ ವರ್ಷ ನವೆಂಬರ್ 26 ರಂದು. ಈ ಪ್ರತಿಭಟನೆಯ ನೇತೃತ್ವವನ್ನು ಎಸ್ಕೆಎಂ ಮತ್ತು ಭಾರತೀಯ ಕಿಸಾನ್ ಯೂನಿಯನ್ ವಹಿಸಿಕೊಂಡಿದೆ. ಮಾರ್ಚ್ 6 ಕ್ಕೆ ಈ ಹೋರಾಟಕ್ಕೆ ನೂರು ದಿನಗಳು ಪೂರೈಸಲಿವೆ.
“ಈ ನೂರು ದಿನಗಳ ನಂತರ, ನಮ್ಮ ಚಳುವಳಿಯು ಸರ್ಕಾರದ ಮೇಲೆ ನೈತಿಕ ಒತ್ತಡ ಹಾಕಲಿದೆ. ಸರ್ಕಾರ ನಮ್ಮೊಂದಿಗೆ ಮತ್ತೆ ಮಾತುಕತೆ ನಡೆಸಿ ನಮ್ಮ ಬೇಡಿಕೆಗಳಿಗೆ ಒಪ್ಪುತ್ತದೆ ಎಂದು ನಾವು ನಂಬಿದ್ದೇವೆ” ಎಂದು ಎಸ್ಕೆಎಂನ ವಕ್ತಾರ ದರ್ಶನ್ ಪಾಲ್ ಹೇಳಿದ್ದಾರೆ. ಜೊತೆಗೆ, “ಇನ್ನೂ ಹೆಚ್ಚಿನ ಸಮಯದ ಹೋರಾಟಕ್ಕೂ ನಾವು ಸಿದ್ಧರಾಗಿದ್ದೇವೆ” ಎಂದಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಹೊಸ ಕೃಷಿ ಕಾಯ್ದೆ ಐಚ್ಛಿಕ: ಹಳೇ ವ್ಯವಸ್ಥೆಯೂ ಮುಂದುವರಿಕೆ, ಆಯ್ಕೆ ರೈತರಿಗೆ ಸೇರಿದ್ದು…
ತವರಿಗೆ ಹೋಗುವ ಬಗ್ಗೆ ವಾಗ್ವಾದ : ಮಕ್ಕಳನ್ನು ಕೊಂದು ಸಾವಿಗೆ ಶರಣಾದ ಮಹಿಳೆ