More

    ಪಶು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ : ಜಾನುವಾರುಗಳ ಚಿಕಿತ್ಸೆಗೆ ರೈತರ ಪರದಾಟ

    ಬಾಗೇಪಲ್ಲಿ: ತಾಲೂಕು ಪಶು ಆಸ್ಪತ್ರೆಗಳಲ್ಲಿ ಶೇ.70 ಸಿಬ್ಬಂದಿ ಕೊರತೆಯಿಂದ ಅನಾರೋಗ್ಯಕ್ಕೆ ಗುರಿಯಾಗಿರುವ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗದಿರುವುದರ ಜತೆಗೆ ಮೃತ ಜಾನುವಾರುಗಳಿಗೆ ಪರಿಹಾರ ಪಡೆಯಲು ತಾಲೂಕು ಪಶು ಆಸ್ಪತ್ರೆಗಳಲ್ಲಿ ಮರಣೋತ್ತರ ಧೃಡೀಕರಣ ಪತ್ರ ಸಿಗದೆ ರೈತರು ಕಂಗಾಲಾಗಿದ್ದಾರೆ.

    ಬಾಗೇಪಲ್ಲಿ ಪಶುಪಾಲನಾ ಇಲಾಖೆಯಲ್ಲಿ 2 ಸಹಾಯಕ ನಿರ್ದೇಶಕರ ಹುದ್ದೆಗಳ ಪೈಕಿ ಒಂದು ಖಾಲಿ ಇದೆ. 10 ಪಶು ವೈದ್ಯರ ಹುದ್ದೆಗಳ ಪೈಕಿ 4 ಹುದ್ದೆಗಳು ಖಾಲಿ ಇವೆ. ಇದರ ಜತೆಗೆ ಜಾನುವಾರು ಅಭಿವೃದ್ಧಿ ಅಧಿಕಾರಿ ಹುದ್ದೆ ಕೂಡ ಖಾಲಿ ಇವೆ. 4 ಜಾನುವಾರು ಅಧಿಕಾರಿ ಹುದ್ದೆಗಳ ಪೈಕಿ 3 ಖಾಲಿ ಇವೆ. 9 ಪಶು ವೈದ್ಯಕೀಯ ಪರೀಕ್ಷಕರ ಹುದ್ದೆಗಳ ಪೈಕಿ 8 ಹಾಗೂ 21ಡಿ ಗ್ರೂಪ್ ನೌಕರರ ಹುದ್ದೆಗಳ ಪೈಕಿ 17 ಖಾಲಿ ಇದ್ದು, ಒಟ್ಟು 51 ಹುದ್ದೆಗಳ ಪೈಕಿ 14 ಹುದ್ದೆಗಳು ಭರ್ತಿಯಾಗಿವೆ. ಉಳಿದ 37 ಹುದ್ದೆಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇಲ್ಲ ಎಂದು ಅಧಿಕಾರಿಗಳು ವಾಹಿತಿ ನೀಡಿದ್ದಾರೆ.

    ತಾಲೂಕು ವ್ಯಾಪ್ತಿಯಲ್ಲಿ 1.46 ಲಕ್ಷ ಕುರಿ, 36 ಸಾವಿರ ಮೇಕೆ, 32 ಸಾವಿರ ಸೀಮೆ ಹಸು ಮತ್ತು ಎಮ್ಮೆಗಳಿವೆ. ಸುವಾರು 25 ಸಾವಿರ ಕುಟುಂಬಗಳು ಹೈನುಗಾರಿಕೆ ಅವಲಂಬಿಸಿವೆ. ಇತ್ತೀಚೆಗೆ ಕುರಿ ಮತ್ತು ಮೇಕೆಗಳಲ್ಲಿ ಶೀತ ಹೆಚ್ಚಾಗಿ ನೀಲಿ ನಾಲಿಗೆ ರೋಗ ಮತ್ತು ಕಾಲಿನ ಸಂದಿಗಳಲ್ಲಿ ಹುಣ್ಣುಗಳು ಕಾಣಿಸಿಕೊಂಡಿವೆ. ಸೀಮೆ ಹಸು, ಎಮ್ಮೆಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಳ್ಳುತ್ತಿದ್ದು ಸಕಾಲಕ್ಕೆ ಚಿಕಿತ್ಸೆ ಲಭಿಸದೆ ಜಾನುವಾರುಗಳು ಮೃತಪಡುತ್ತಿವೆ. ಇದರಿಂದ ನಷ್ಕಕ್ಕೆ ಗುರಿಯಾಗಿರುವ ರೈತರು ಕುರಿ ಮತ್ತು ಹುಣ್ಣೆ ಅಭಿವೃದ್ಧಿ ಮಂಡಳಿಯ ಅನುಗ್ರಹ ಯೋಜನೆಯಲ್ಲಿ ಸಿಗುವ 5 ಸಾವಿರ ರೂ. ಪರಿಹಾರ ಹಣಕ್ಕಾಗಿ ಅರ್ಜಿ ಸಲ್ಲಿಸಲು, ಪಶು ಇಲಾಖೆಯ ಮರಣೋತ್ತರ ವರದಿ ದೃಢಿಕರಣ ಪತ್ರ ಕಡ್ಡಾಯವಾಗಿದ್ದು, ವರದಿ ನೀಡುವ ವೈದ್ಯರು ಇಲ್ಲದೆ ರೈತರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಗೂಳೂರು, ಪಾತಪಾಳ್ಯ ಹೋಬಳಿ ಕೇಂದ್ರಗಳು ಸೇರಿ ಚೇಳೂರು ತಾಲೂಕು ಕೇಂದ್ರದ ಪಶು ವೈದ್ಯ ಆಸ್ಪತ್ರೆಗಳಲ್ಲಿ 4 ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದು ಡಿ ಗ್ರೂಪ್ ನೌಕರರು ಕಾಟಾಚಾರಕ್ಕೆ ಆಸ್ಪತ್ರೆ ತೆರೆದುಕೊಂಡಿದ್ದಾರೆ.

    ಬಾಗೇಪಲ್ಲಿ ತಾಲೂಕಿನ ಪಶು ವೈದ್ಯ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆ, ಔಷಧ ದಾಸ್ತಾನು ಹಾಗೂ ಸಲಕರಣೆಗಳ ಕೊರತೆ ಬಗ್ಗೆ ಸ್ಥಳೀಯ ಜನಪ್ರತಿನಿಧಿ ನಿಗಾವಹಿಸಿ ರೈತರ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಬೇಕಾಗಿದೆ.
    ಜಿ.ಎಂ.ರಾಮಕೃಷ್ಣಪ್ಪ, ರೈತ ಬಾಗೇಪಲ್ಲಿ

    ತಿಂಗಳ ಹಿಂದಷ್ಟೇ ಖರೀದಿಸಿದ ಸೀಮೆ ಹಸು ಅನಾರೋಗ್ಯಕ್ಕೆ ಗುರಿಯಾಗಿದ್ದು, ಚೇಳೂರು ಪಶು ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಸೀಮೆ ಹಸು ಮೃತಪಟ್ಟಿದೆ.
    ರೈತ ವೆಂಕಟರವಣ, ಚೇಳೂರು

    ಸಿಬ್ಬಂದಿ ಕೊರತೆ ಬಗ್ಗೆ 6 ತಿಂಗಳ ಹಿಂದೆಯಷ್ಟೇ ಇಲಾಖೆಯ ಮೇಲಧಿಕಾರಿಗಳ ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಸಿಬ್ಬಂದಿ ಕೊರತೆ ಕಾರಣ ಸಮರ್ಪಕ ವೈದ್ಯಸೇವೆ ಸಾಧ್ಯವಾಗುತ್ತಿಲ್ಲ.

    ಡಾ.ಎನ್.ಇ.ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕ, ಪಶುಪಾಲನಾ ಇಲಾಖೆ ಬಾಗೇಪಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts