ಮುಂಬೈ: ಇಲ್ಲಿನ ಪ್ರಸಿದ್ಧ ಚಿತ್ರಕಲಾವಿದ ರಾಮ್ ಇಂದ್ರಾನಿಲ್ ಕಾಮತ್ (ರಾಮಚಂದ್ರ 41) ಅವರು ಇಂದು ಮೃತಪಟ್ಟಿದ್ದಾರೆ.
ನಿನ್ನೆ ಮಧ್ಯಾಹ್ನ 3ಗಂಟೆ ಸುಮಾರಿಗೆ ಅವರು ತಮ್ಮ ಮನೆಯ ಬಾತ್ಟಬ್ನಲ್ಲಿ ಪ್ರಜ್ಞಾಶೂನ್ಯರಾಗಿ ಬಿದ್ದಿದ್ದರು. ನಂತರ ಅವರನ್ನು ಸಿಯೋನ್ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಹೋಗುವಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಲಾವಿದನ ಆಕಸ್ಮಿಕ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಆದರೆ ಮೃತದೇಹದ ಪೋಸ್ಟ್ಮಾರ್ಟಂ ನಂತರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸತ್ಯ ಬೆಳಕಿಗೆ ಬಂದಿದೆ. ಸ್ಥಳ ಪರಿಶೀಲನೆ ಮಾಡಿದಾಗ ಸೂಸೈಡ್ ನೋಟ್ ಕೂಡ ಪತ್ತೆಯಾಗಿದೆ. ಆದರೆ ಕಾರಣವಿನ್ನೂ ನಿಗೂಢವಾಗಿದೆ.(ಏಜೆನ್ಸೀಸ್)