More

    ಬಾತ್​ಟಬ್​​ನಲ್ಲಿ ಎಚ್ಚರವಿಲ್ಲದೆ ಬಿದ್ದಿದ್ದ ಖ್ಯಾತ ಕಲಾವಿದ: ಪೋಸ್ಟ್​ಮಾರ್ಟಮ್​ ಬಳಿಕ ಗೊತ್ತಾಯ್ತು ಸತ್ಯ

    ಮುಂಬೈ: ಇಲ್ಲಿನ ಪ್ರಸಿದ್ಧ ಚಿತ್ರಕಲಾವಿದ ರಾಮ್ ಇಂದ್ರಾನಿಲ್​ ಕಾಮತ್​ (ರಾಮಚಂದ್ರ 41) ಅವರು ಇಂದು ಮೃತಪಟ್ಟಿದ್ದಾರೆ.
    ನಿನ್ನೆ ಮಧ್ಯಾಹ್ನ 3ಗಂಟೆ ಸುಮಾರಿಗೆ ಅವರು ತಮ್ಮ ಮನೆಯ ಬಾತ್​ಟಬ್​​ನಲ್ಲಿ ಪ್ರಜ್ಞಾಶೂನ್ಯರಾಗಿ ಬಿದ್ದಿದ್ದರು. ನಂತರ ಅವರನ್ನು ಸಿಯೋನ್​ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಹೋಗುವಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಕಲಾವಿದನ ಆಕಸ್ಮಿಕ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಆದರೆ ಮೃತದೇಹದ ಪೋಸ್ಟ್​ಮಾರ್ಟಂ ನಂತರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸತ್ಯ ಬೆಳಕಿಗೆ ಬಂದಿದೆ. ಸ್ಥಳ ಪರಿಶೀಲನೆ ಮಾಡಿದಾಗ ಸೂಸೈಡ್​ ನೋಟ್​ ಕೂಡ ಪತ್ತೆಯಾಗಿದೆ. ಆದರೆ ಕಾರಣವಿನ್ನೂ ನಿಗೂಢವಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts