Fact Check| ಜೆಎನ್​ಯುನಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಿಸಿದರೇ? ಅದಕ್ಕೆ ಪ್ರಧಾನಿ ಮೋದಿ ಕಾರಣರಾ?

blank

ನವದೆಹಲಿ: ದೆಹಲಿಯ ಜವಾಹರ‌ಲಾಲ್ ನೆಹರು ವಿಶ್ವವಿದ್ಯಾಲಯವು(ಜೆಎನ್​ಯು) 50 ವರ್ಷದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಣೆಯನ್ನು ಮಾಡಿದೆಯೇ? ಹೌದು ಎಂದು ನಂಬಿದ್ದಾರೆ ಕೆಲವು ಸಾಮಾಜಿಕ ಜಾಲತಾಣಿಗರು. ಇದಕ್ಕೆ ಸಂಬಂಧಿಸಿದ ವೈರಲ್​ ಪೋಸ್ಟ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರಣದಿಂದಾಗಿ 50 ವರ್ಷದಲ್ಲಿ ಮೊದಲ ಬಾರಿಗೆ ಜೆಎನ್​ಯುನಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದು ವಾದಿಸಲಾಗಿದ್ದು, ಇದು ಅಕ್ಷರಶಃ ಸುಳ್ಳು ಎಂಬುದು ಫ್ಯಾಕ್ಟ್​ಚೆಕ್​ನಲ್ಲಿ ಬಹಿರಂಗವಾಗಿದೆ.

blank

ಪುಷ್ಪೇಂದ್ರ ಕುಲಶ್ರೇಷ್ಠ ಫ್ಯಾನ್ಸ್​ ಕ್ಲಬ್​ ಹೆಸರಿನ ಫೇಸ್​ಬುಕ್​ ಪೇಜ್​ನಲ್ಲಿ ಹಿಂದಿ ಭಾಷೆಯಲ್ಲಿ ಪೋಸ್ಟ್​ ಅಪ್​ಲೋಡ್​ ಮಾಡಲಾಗಿದ್ದು, ತರ್ಜುಮೆ ಮಾಡಿದಾಗ 50 ವರ್ಷದಲ್ಲಿ ಇದೇ ಮೊದಲ ಬಾರಿಗೆ ಜನವರಿ 26ರಂದು ಜೆಎನ್​ಯುನಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂದು ಬರೆದು ಕೆಲ ದಿನಗಳ ಹಿಂದೆ ಪೋಸ್ಟ್​ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ನೆಟ್ಟಿಗರು ಸಹಮತವನ್ನು ವ್ಯಕ್ತಪಡಿಸಿದ್ದು, ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದುವರೆಗೂ ಸುಮಾರು 1,800 ಬಾರಿ ಶೇರ್​ ಮಾಡಲಾಗಿದೆ.

Fact Check| ಜೆಎನ್​ಯುನಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಿಸಿದರೇ? ಅದಕ್ಕೆ ಪ್ರಧಾನಿ ಮೋದಿ ಕಾರಣರಾ?

ಈ ವಿಚಾರವು ಇಂಡಿಯಾ ಟುಡೆ ಗಮನಕ್ಕೆ ಬಂದು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್ ವಾರ್​ ರೂಮ್​ ಸತ್ಯಾಂಶವನ್ನು ಬಯಲಿಗೆ ಎಳೆದಿದೆ. ಹಿಂದಿನ ವರ್ಷಗಳಲ್ಲಿ ಜೆಎನ್​ಯುನಲ್ಲಿ ನಡೆದ ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಫೋಟೋಗಳನ್ನು ಫೇಸ್​ಬುಕ್​ನಲ್ಲಿ ಹುಡುಕಿದಾಗ ಅನೇಕ ಫೋಟೋಗಳು ದೊರೆತಿದೆ. ಸೇನಾ ಸಮವಸ್ತ್ರದಲ್ಲಿ ಕೆಲ ಮಕ್ಕಳು, ಸಿಬ್ಬಂದಿ ಮತ್ತು ಉಪಕುಲಪತಿ ನೇತೃತ್ವದಲ್ಲಿ ಧ್ವಜಾರೋಹನ ನಡೆಸಿರುವ ಅನೇಕ ಫೋಟೋಗಳು ಲಭ್ಯವಾಗಿದೆ. ​

ಫೇಸ್​ಬುಕ್​ ಬಳಕೆದಾರರು ಕ್ರಮವಾಗಿ 2017, 2016, 2015 ಹಾಗೆ 2014ರಲ್ಲಿ ಅಪ್​ಲೋಡ್​ ಮಾಡಿರುವ ಅನೇಕ ಫೋಟೋಗಳು ಇಂಡಿಯಾ ಟುಡೆಗೆ ಲಭ್ಯವಾಗಿವೆ.

ಆಚರಣೆಗೆ ಸಂಬಂಧಿಸಿದಂತೆ ಜೆಎನ್​ಯು ರಿಜಿಸ್ಟ್ರಾರ್​ ಡಾ. ಪ್ರಮೋದ್​ ಕುಮಾರ್​ ಎಂಬುವರು ಮಾತನಾಡಿ ವಿಶ್ವವಿದ್ಯಾಲಯ ಪ್ರಾರಂಭವಾದ ದಿನದಿಂದಲೂ ಜನವರಿ 26ರಂದು ನಿರಂತರವಾಗಿ ಗಣರಾಜ್ಯೋತ್ಸವ ಸಂಭ್ರಮಾಚರಣೆ ಮಾಡಿಕೊಂಡು ಬರಲಾಗುತ್ತಿದೆ. ನಾವು ದೊಡ್ಡ ಕಾರ್ಯಕ್ರಮವನ್ನೇ ಹಮ್ಮಿಕೊಳ್ಳುತ್ತೇವೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮುಂದುವರಿದು ಮಾತನಾಡಿ ಇದೇ ಮೊದಲ ಬಾರಿಗೆ ನ್ಯಾಷನಲ್​ ಕೆಡೆಟ್​ ಕಾರ್ಪ್ಸ್​(ಎನ್​ಸಿಸಿ)ಯನ್ನು ಜೆಎನ್​ಯುನಲ್ಲಿ ಆರಂಭಿಸಲಾಗಿದೆ. ಇದರಲ್ಲಿ ನೋಂದಾವಣೆಯಾಗಿರುವ ಕೆಲವು ವಿದ್ಯಾರ್ಥಿಗಳು ಈ ವರ್ಷದ ಪರೇಡ್​ ಅನ್ನು ನಡೆಸಲಿದ್ದಾರೆ. ಇದನ್ನು ಹೊರತುಪಡಿಸಿದರೆ ಪ್ರತಿವರ್ಷವು ಸಂಭ್ರಮಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

blank

ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಆಗುವ ಮುಂಚೆಯಿಂದಲೂ ಜೆಎನ್​ಯುನಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿದೆ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ. (ಏಜೆನ್ಸೀಸ್​)

Share This Article

Health Tips | ತುಪ್ಪ & ಜೇನುತುಪ್ಪವನ್ನು ಒಟ್ಟಿಗೆ ತಿನ್ನುವುದು ವಿಷಕಾರಿಯೇ?; ಇಲ್ಲಿದೆ ಹೆಲ್ತಿ ಮಾಹಿತಿ

ತುಪ್ಪ ಮತ್ತು ಜೇನುತುಪ್ಪ ಎರಡೂ ವ್ಯಕ್ತಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆಯುರ್ವೇದದಲ್ಲಿ ಇವೆರಡನ್ನೂ ಬಹಳ ಮುಖ್ಯವೆಂದು…

ತೂಕ ಇಳಿಸಲು ಫ್ರೂಟ್ಸ್​​ ಅಥವಾ ಜ್ಯೂಸ್​​​​ ಯಾವುದು ಉತ್ತಮ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಬೇಸಿಗೆಕಾಲ ಮಾತ್ರವಲ್ಲ ಬಹಳಷ್ಟು ಜನರು ಆರೋಗ್ಯದ ದೃಷ್ಟಿಯಿಂದ ಫ್ರೂಟ್​ ಜ್ಯೂಸ್​​​ ಅನ್ನು ಕುಡಿಯುತ್ತಾರೆ. ಹಣ್ಣುಗಳ ರಸ…

ಚಳಿಗಾಲದಲ್ಲಿ ಈ ಜ್ಯೂಸ್ ಕುಡಿದರೆ ಸಾಕು….ಸರ್ವ ರೋಗಕ್ಕೂ ಮದ್ದು spinach juice

spinach juice: ಚಳಿಗಾಲದಲ್ಲಿ ಹಲವು ರೀತಿಯ ಸಮಸ್ಯೆಗಳು ಕಾಡುತ್ತವೆ.  ಚಳಿಗಾಲದಲ್ಲಿ ಒಂದು ಜ್ಯೂಸ್ ಸೇವಿಸುವುದರಿಂದ ಹಲವಾರು…