More

    ಮದ್ಯ ಮಾರಾಟಕ್ಕೆ ಈಗಿರುವ ಅವಧಿಯನ್ನು ವಿಸ್ತರಿಸುವಂತೆ ಆಗ್ರಹ: ಸಿಎಂ ಗೆ ಪತ್ರ ಬರೆದ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್

    ಬೆಂಗಳೂರು: ಮೇ 12ರವರೆಗೆ ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ಇದೆ.

    ಆದರೆ, ರಾಜ್ಯದಲ್ಲಿ ಮದ್ಯ ಮಾರಾಟದ ಅವಧಿ ವಿಸ್ತರಣೆಗೆ ಒತ್ತಾಯ ಕೇಳಿ ಬಂದಿದೆ. ಮದ್ಯ ಮಾರಾಟಕ್ಕೆ 10 ಗಂಟೆಯವರೆಗೆ ಇರುವ ಅವಧಿಯನ್ನು ವಿಸ್ತರಣೆ ಮಾಡಲು ಫೆಡರೇಷನ್‌ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಒತ್ತಾಯಿಸಿದೆ.

    ಈ ಕುರಿತು ಶನಿವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಫೆಡರೇಷನ್‌ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಆಗ್ರಹ ಮಾಡಿದೆ.

    ಬೆಳಿಗ್ಗೆ ಮದ್ಯ ಖರೀದಿ ಮಾಡಲು ಗ್ರಾಹಕರು ಮುಜುಗರ ಅನುಭವಿಸುತ್ತಾರೆ. ಇದರಿಂದ ಮಧ್ಯ ಮಾರಾಟಗಾರರಿಗೆ ನಷ್ಟ ಆಗ್ತಿದೆ. ಗಾರ್ಮೆಂಟ್ಸ್ ಮತ್ತು ನಂದಿನಿ ಹಾಲು‌ ಮಾರಾಟಗಾರರಿಗೆ ನೀಡಿರುವ ವಿನಾಯಿತಿಯನ್ನು ಮದ್ಯ ಮಾರಾಟಗಾರರಿಗೂ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ತಿಳಿಸಿದ್ದಾರೆ.

    ಪದವಿ ಕಾಲೇಜು ಉಪನ್ಯಾಸಕರ ವರ್ಗಾವಣೆಗೆ ಆದೇಶ: ಬೋಧಕ ವಲಯದಲ್ಲಿ ಭುಗಿಲೆದ್ದ ಅಸಮಾಧಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts