ಇಸ್ಲಾಮಾಬಾದ್/ನವದೆಹಲಿ: ಪಾಕಿಸ್ತಾನ ಸರ್ಕಾರದ ಗಮನಕ್ಕೇ ಬಾರದಂತೆ ಅದರ ರಾಯಭಾರ ಕಚೇರಿ ಕಟ್ಟಡವನ್ನೇ ರಾಜತಾಂತ್ರಿಕ ಅಧಿಕಾರಿಯೊಬ್ಬ ರಹಸ್ಯವಾಗಿ ಮಾರಾಟ ಮಾಡಿದ್ದ. ಇದರಿಂದಾಗಿ ಪಾಕಿಸ್ತಾನದ ಬೊಕ್ಕಸಕ್ಕೆ 22.24 ಕೋಟಿ ಪಾಕಿಸ್ತಾನಿ ರೂಪಾಯಿ ನಷ್ಟ ಉಂಟಾಗಿದೆ. ಈ ಸಂಬಂಧ ಆ ಅಧಿಕಾರಿಯನ್ನು ಬಾಧ್ಯಸ್ಥನನ್ನಾಗಿ ಮಾಡಿ ಆತನ ವಿರುದ್ಧ ದೋಷಾರೋಪಣೆಯನ್ನು ಕೋರ್ಟ್ನಲ್ಲಿ ಮಾಡಲಾಗಿದೆ ಎಂದು ದ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಸರ್ಕಾರವನ್ನೇ ಈ ರೀತಿ ವಂಚಿಸಿದ ಅಧಿಕಾರಿ ಹೆಸರು ಮೇಜರ್ ಜನರಲ್ (ನಿವೃತ್ತ ) ಸೈಯದ್ ಮುಸ್ತಾಫ ಅನ್ವರ್. ಇಂಡೋನೇಷ್ಯಾದ ಜಕಾರ್ತಾದಲ್ಲಿ 2001-02ರ ಅವಧಿಯಲ್ಲಿ ರಾಜತಾಂತ್ರಿಕ ಅಧಿಕಾರಿಯಾಗಿದ್ದ ಅನ್ವರ್, ಆ ಅವಧಿಯಲ್ಲಿ ಕಟ್ಟಡವನ್ನು ಅದರ ಮೌಲ್ಯಕ್ಕಿಂತಲೂ ಬಹಳ ಕಡಿಮೆ ಬೆಲೆ ರಹಸ್ಯವಾಗಿ ಮಾರಾಟ ಮಾಡಿದ್ದರು. ಅವರ ಈ ನಡೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ 22 ಕೋಟಿ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ(ಎನ್ಎಬಿ) ಆಗಸ್ಟ್ 19ರಂದು ಅಕೌಂಟೆಬಿಲಿಟಿ ಕೋರ್ಟ್ನಲ್ಲಿ ಸಾಕ್ಷ್ಯ ಸಲ್ಲಿಸಿದೆ.
ಇದನ್ನೂ ಓದಿ: ಪುಲ್ವಾಮಾ ದಾಳಿ: ಪಾಕ್ನ ಉಗ್ರ ಮುಖ ಬಯಲು- 5 ಸಾವಿರ ಪುಟಗಳಲ್ಲಿದೆ ಮಾಹಿತಿ
ವಿದೇಶಾಂಗ ಸಚಿವಾಲಯದ ಅನುಮತಿ ಪಡೆಯದೇ ಅನ್ವರ್ ಕಟ್ಟಡ ಮಾರೋದಕ್ಕೆ ಜಾಹೀರಾತು ನೀಡಿದ್ದರು. ಅದರ ಪತ್ರಿಕಾ ತುಣುಕನ್ನು ಮತ್ತು ಪೂರಕ ದಾಖಲೆಯನ್ನು ಕೋರ್ಟ್ಗೆ ಸಲ್ಲಿಸಿದ ದಾಖಲೆಗಳಲ್ಲಿವೆ.ವಿಶೇಷ ಎಂದರೆ ಈ ವ್ಯಕ್ತಿ 2015ರಲ್ಲಿ “Couldn’t Have Been Better: My Life Story” ಎಂಬ ಪುಸ್ತಕವನ್ನೂ ಬರೆದು ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಉಪ್ಪಿನಕಾಯಿ ಜಾರೂ ಹೋಯ್ತು, 81,000 ರೂಪಾಯಿನೂ ಹೋಯ್ತು!
ಎನ್ಎಬಿಯು ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾಗಿದ್ದು, ಕಳೆದ ತಿಂಗಳು ಸುಪ್ರೀಂ ಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡಿತ್ತು. ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನು ಬೇಗ ಮಾಡುವುದಿಲ್ಲ. ಅಧಿಕಾರಿಗಳೂ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿತ್ತು. (ಏಜೆನ್ಸೀಸ್)
VIDEO: ಡಿಜೆ ಹಳ್ಳಿ ಗಲಭೆ ಬಗ್ಗೆ ಬಿಜೆಪಿ ನಾಯಕ ಅಣ್ಣಾಮಲೈ ಹೇಳಿದ್ದೇನು?