ನವದೆಹಲಿ: ಮಾರ್ಚ್ 11 ರಂದು ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಬಂದಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆಯನ್ನೂ ಹೊರಡಿಸಿದೆ. ಭಾರತದಲ್ಲಿ ಸಿಎಎ ಜಾರಿಯನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಬೆಂಬಲಿಸಿದ್ದು, ಈ ಕಾಯ್ದೆಯನ್ನು ಜಾರಿಗೆ ತಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಅರ್ಪಿಸಿದರು.
Thank you @narendramodi ji and @AmitShah ji for notifying Citizenship Amendment Act.
— Danish Kaneria (@DanishKaneria61) March 11, 2024
ಸಿಎಎ ಜಾರಿಯಾದರೆ ಏನಾಗುತ್ತದೆ?
ಭಾರತದಲ್ಲಿ ಸಿಎಎ ಜಾರಿಯಿಂದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಕ್ರಿಶ್ಚಿಯನ್ನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವವನ್ನು ಪಡೆಯುವುದು ಸುಲಭವಾಗುತ್ತದೆ.
Pakistani Hindus will now be able to breathe in open air. #CAA
— Danish Kaneria (@DanishKaneria61) March 11, 2024
ಡ್ಯಾನಿಶ್ ಕನೇರಿಯಾ ಯಾರು?
ಡ್ಯಾನಿಶ್ ಕನೇರಿಯಾ ಒರ್ವ ಹಿಂದೂ. ಪಾಕಿಸ್ತಾನ ಕ್ರಿಕೆಟ್ ಟೀಂನಲ್ಲಿ ಇದ್ದಾರೆ. ಅವರು ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರವನ್ನು ಹಲವು ಸಂದರ್ಭಗಳಲ್ಲಿ ಬೆಂಬಲಿಸಿದ್ದಾರೆ. ಈ ಲೆಗ್ ಸ್ಪಿನ್ನರ್ ತನ್ನ ವಿರುದ್ಧ ಪಾಕಿಸ್ತಾನ ಟೀಂನಲ್ಲಿ ಮಾಡಿರುವ ತಾರತಮ್ಯದ ಆರೋಪಗಳನ್ನು ಹಲವು ಬಾರಿ ಎದುರಿಸಿದ್ದಾರೆ. ಅವರು ಪಾಕಿಸ್ತಾನಕ್ಕಾಗಿ 61 ಟೆಸ್ಟ್ ಮತ್ತು 18 ODIಗಳನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 261 ವಿಕೆಟ್ಗಳನ್ನು ಹೊಂದಿದ್ದಾರೆ, ಆದರೆ ಅವರು ಏಕದಿನದಲ್ಲಿ 15 ವಿಕೆಟ್ಗಳನ್ನು ಪಡೆದಿದ್ದಾರೆ. ಈ ಕ್ರಿಕೆಟಿಗನ ಮೇಲೆ 2010 ರಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪವೂ ಇದೆ, ಆದರೆ ಪೊಲೀಸರು ಅವರಿಗೆ ಕ್ಲೀನ್ ಚಿಟ್ ನೀಡಿದ್ದರು.
CAA Notification: ಈ ರಾಜ್ಯಗಳಲ್ಲಿ ಸಿಎಎ ಜಾರಿಯಾಗುವುದಿಲ್ಲ ಕಾರಣವೇನು?