More

    ಸುಸ್ತಿ ಸಾಲ ವಸೂಲಿ ಮಾಡಿ ಬ್ಯಾಂಕ್ ಉಳಿಸಿ

    ಚಿಕ್ಕಮಗಳೂರು: ಸುದೀರ್ಘ ಕಾಲದಿಂದ ಸುಸ್ತಿಯಾಗಿ ಉಳಿದಿರುವ ಬ್ಯಾಂಕ್​ಗಳ ಸಾಲ ವಸೂಲಿಗೆ ಕ್ರಮಕೈಗೊಳ್ಳುವ ಮೂಲಕ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್​ಗಳನ್ನು ಉಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಬ್ಯಾಂಕ್ ನೌಕರರ ಒಕ್ಕೂಟದ ಆಶ್ರಯದಲ್ಲಿ ಎಸ್​ಬಿಐ ಹೊಸಮನೆ ಬ್ಯಾಂಕ್ ಶಾಖೆ ಎದುರು ಪ್ರತಿಭಟನೆ ನಡೆಸಿದರು.

    ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ಬ್ಯಾಂಕ್ ನೌಕರರ ಕೆಲಸ ವಾರದಲ್ಲಿ ಐದು ದಿನವನ್ನಾಗಿಸಿ ಜಾರಿ ಮಾಡಬೇಕು. ಬ್ಯಾಂಕ್​ಗೆ ಸುಸ್ತಿಯಾಗಿ ಉಳಿದ ಸಾಲದ ವಸೂಲಾತಿಗೆ ಕ್ರಮಕೈಗೊಳ್ಳಬೇಕು. ಅಧಿಕಾರಿಗಳಿಗೆ ನಿಗದಿತ ಕೆಲಸದ ಸಮಯ ಜಾರಿಯಾಗಬೇಕು. ಕಾಯಂ ಹುದ್ದೆಗಳಿಗೆ ಹೊರ ಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

    ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಪ್ರಾದೇಶಿಕ ಕಾರ್ಯದರ್ಶಿ ಜಯಪ್ರಕಾಶ್, ಕಿಶೋರ್​ಕುಮಾರ್, ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಸಂಘಟನಾ ಕಾರ್ಯದರ್ಶಿ ಉಜ್ವಲ್ ಪಡುಬಿದ್ರಿ, ಅರ್ಪಣ, ಮೇರಿ, ನಿವೃತ್ತ ನೌಕರ ಎಸ್.ಟಿ.ಹಾಲಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts