More

    ಸಾಮಾಜಿಕ ನಾಟಕಗಳ ಪ್ರದರ್ಶನಕ್ಕೂ ಒತ್ತು ನೀಡಿ

    ಕೆ.ಎಂ.ದೊಡ್ಡಿ: ಗ್ರಾಮೀಣ ಪ್ರದೇಶಗಳಲ್ಲಿ ಪೌರಾಣಿಕ ನಾಟಕಗಳಷ್ಟೇ ಸಾಮಾಜಿಕ ನಾಟಕಗಳ ಪ್ರದರ್ಶನಕ್ಕೂ ಒತ್ತು ನೀಡಬೇಕು ಎಂದು ಕದಲೂರು ಉದಯ್ ಚಾರಿಟಬಲ್ ನಿರ್ದೇಶಕ ಕದಲೂರು ರವಿ ತಿಳಿಸಿದರು.

    ಸಮೀಪದ ಬೊಮ್ಮನದೊಡ್ಡಿಯಲ್ಲಿ ಬಾಳಿನ ದಾರಿ/ಸಂಸಾರ ನೌಕೆ ಸಾಮಾಜಿಕ ನಾಟಕಕ್ಕೆ ಆರ್ಥಿಕ ನೆರವು ನೀಡಿ ಮಾತನಾಡಿದ ಅವರು, ರಂಗ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಪಾತ್ರ ಬಹಳ ಮುಖ್ಯ ಎಂದರು.

    ಇತ್ತಿಚೀನ ದಿನಗಳಲ್ಲಿ ನಾಟಕ ನೋಡುವ ಹವ್ಯಾಸ ಕಡಿಮೆಯಾಗುತ್ತಿದೆ. ನಾಟಕಗಳನ್ನು ಹೆಚ್ಚೆಚ್ಚು ನೋಡುವ ಮೂಲಕ ನಾಟಕ ಕಲೆ
    ಉಳಿಸಿ ಬೆಳೆಸಲು ಸಹಕಾರ ನೀಡಬೇಕೆಂದು ಹೇಳಿದರು. ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ಮುಖಂಡರಾದ ರವೀಂದ್ರ, ತೈಲೂರು ಸಿದ್ದರಾಜು, ಪ್ರೋ.ಬಸವಲಿಂಗೇಗೌಡ, ಸಿದ್ದರಾಜು, ಬುಲೆಟ್ ಬಸವರಾಜು, ಮಾದೇಗೌಡ, ಪುಟ್ಟ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts