More

    ಹೃದಯಾಘಾತಕ್ಕೀಡಾಗಿ ಎಂಟು ತಿಂಗಳ ಮಗು ಸಾವು; ಆರೋಗ್ಯ ಸಚಿವರಿಗೆ ದೂರು

    ಕೊಟ್ಟಾಯಂ: ದೇಶಾದ್ಯಂತ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದ್ದು, ಅದರಿಂದ ಸಾಯುವವರ ಸಂಖ್ಯೆಯೂ ಅಧಿಕವಾಗಿದೆ. ಎಂಟು ತಿಂಗಳ ಮಗು ಕೂಡ ಹೃದಯಾಘಾತದಿಂದ ಸಾವಿಗೀಡಾದ ಪ್ರಕರಣ ವರದಿಯಾಗಿದ್ದು, ಆ ಸಂಬಂಧ ಆರೋಗ್ಯ ಸಚಿವರಿಗೂ ದೂರು ಸಲ್ಲಿಕೆ ಆಗಿದೆ.

    ಕೇರಳದ ಮನಾರ್ಕಾಡ್​ನ ಪಥಝಕುಝಿಯ ಸ್ಥಳೀಯ ನಿವಾಸಿ ಎಬಿ-ಜಾನ್ಸಿ ದಂಪತಿಯ ಪುತ್ರ ಜೋಶ್​ ಸಾವಿಗೀಡಾದ ಮಗು. ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದಲ್ಲಿ ಈ ಪ್ರಕರಣ ನಡೆದಿದೆ. ಜ್ವರದಿಂದ ಬಳಲುತ್ತಿದ್ದ ಈ ಮಗುವನ್ನು ಮೇ 11ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಇದನ್ನೂ ಓದಿ: ಸೋತರೂ ಕಾಂಗ್ರೆಸ್​ನವರು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ: ಜಗದೀಶ ಶೆಟ್ಟರ್​

    ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಮಗುವಿನ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದರಿಂದ ಮೇ 29ರಂದು ಐಸಿಯುಗೆ ದಾಖಲಿಸಲಾಗಿತ್ತು. ಚುಚ್ಚುಮದ್ದು ನೀಡುವುದರಿಂದ ಮಗುವಿಗೆ ಹೃದಯಾಘಾತ ಉಂಟಾಗುವ ಅಪಾಯವಿದೆ ಎಂದು ಗೊತ್ತಿದ್ದರೂ ಅದಕ್ಕೆ ಹೆಚ್ಚಿನ ತೀವ್ರತೆಯ ಇಂಜೆಕ್ಷನ್ ನೀಡಲಾಗಿದೆ. ಆ ಬಳಿಕ ಸೂಕ್ತ ಗಮನ ಹರಿಸದ್ದರಿಂದ ಮಗು ಉಸಿರಾಟದ ಸಮಸ್ಯೆಗೆ ಒಳಗಾಗಿ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಗುವಿನ ಕುಟುಂಬಸ್ಥರು ಅಲ್ಲಿನ ಆರೋಗ್ಯ ಸಚಿವರಿಗೂ ದೂರು ನೀಡಿದ್ದಾರೆ.

    ಮಹಿಳೆಯರ ‘ಶಕ್ತಿ’ಗೆ ಕಿತ್ತು ಹೋಯ್ತು ಇನ್ನೊಂದು ಬಸ್ ಡೋರ್!

    ಪೂರ್ವಜರ ಸಮಾಧಿಗಳ ಧ್ವಂಸ ಆರೋಪ; ಮಠದ ಬಳಿ ಬಿಗಿ ಪೊಲೀಸ್ ಭದ್ರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts