ಬೆಂಗಳೂರು : ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಿವಾಸದ ಮೇಲೆ ಇಡಿ ಅಟ್ಯಾಕ್ ಆಗಿರುವುದು ರಾಜಕೀಯ ಪ್ರೇರಿತ ಎಂಬ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ನಾನು ಇಡಿ, ಐಟಿ ಆಫೀಸರ್ ಅಲ್ಲ. ನಾನು ಇದರ ಬಗ್ಗೆ ಉತ್ತರ ಕೊಡೋಕೆ ಆಗಲ್ಲ. ಯಾರು ಅಕ್ರಮ ಮಾಡಿದ್ದಾರೆ ಅವರ ಮೇಲೆ ತನಿಖೆ ಆಗುತ್ತೆ. ತಮ್ಮ ತಪ್ಪುಗಳನ್ನ ಮುಚ್ಚಿಕೊಳ್ಳೋಕೆ ಆ ರೀತಿ ಆರೋಪ ಮಾಡ್ತಾರೆ. ಐಟಿ, ಇಡಿಯವರಿಗೆ ಗೊತ್ತಿರುತ್ತದೆ. ಅದನ್ನ ಯಾರೂ ಮಾಡಲ್ಲ” ಎಂದಿದ್ದಾರೆ.
ಮೇಕೆದಾಟು ಯೋಜನೆಗೆ ತಮಿಳುನಾಡಿನಲ್ಲಿ ಬಿಜೆಪಿಯ ಅಣ್ಣಾಮಲೈ ಪ್ರತಿಭಟನೆ ಮಾಡುತ್ತಿರುವ ವಿಚಾರ ಪ್ರಸ್ತಾಪಿಸಿದಾಗ, ಅವನನ್ನ ದೊಡ್ಡ ಮನುಷ್ಯನ್ನ ಮಾಡೋ ಅವಶ್ಯಕತೆಯಿಲ್ಲ. ಹೆಚ್ಚುವರಿ ನೀರು ತಡೆದು ನೀರು ಕೊಡಬೇಕು. ಅದಕ್ಕೆ ಈ ಯೋಜನೆ ತರುವುದು. ಪ್ರತಿಭಟನೆ ಮಾಡ್ತಾರೆ ಅಂದ್ರೆ ರಾಜಕೀಯ ಪ್ರೇರಿತ. ಅಣ್ಣಾಮಲೈ ಪ್ರತಿಭಟನೆಗೆ ಐ ಡೋಂಟ್ ಕೇರ್” ಎಂದರು, ಸಿಎಂ ಬಸವರಾಜ ಬೊಮ್ಮಾಯಿ.
‘ಐಟಿ ಕಾಯ್ದೆಯಡಿ ದೂರು ಯಾಕೆ ಸಲ್ಲಿಸಿಲ್ಲ?’ – ಪೆಗಾಸಸ್ ವಿಚಾರಣೆಯಲ್ಲಿ ಸುಪ್ರೀಂ ಪ್ರಶ್ನೆ
ಪಂಜಾಬ್ ಸಿಎಂ ಅಮರಿಂದರ್ ಸಿಂಗ್ಗೆ ಮತ್ತೊಂದು ಶಾಕ್! ಪ್ರಶಾಂತ್ ಕಿಶೋರ್ ರಾಜೀನಾಮೆ