More

    ದುಬೆಯನ್ನು ಆಸ್ಪತ್ರೆಗೆ ಕರೆತಂದಾಗ ಆತ ಅದಾಗಲೇ ಸತ್ತಿದ್ದ

    ನವದೆಹಲಿ: ಕುಖ್ಯಾತ ಪಾತಕಿ ವಿಕಾಸ್​ ದುಬೆಯನ್ನು ಪೊಲೀಸರು ಆಸ್ಪತ್ರೆಗೆ ಕರೆತಂದಾಗ ಆತ ಅದಾಗಲೇ ಮೃತಪಟ್ಟಿದ್ದ ಎಂದು ಹೇಳುವ ಮೂಲಕ ವೈದ್ಯರು ವಿಕಾಸ್​ ದುಬೆಯ ಎನ್​ಕೌಂಟರ್​ ಪ್ರಕರಣಕ್ಕೆ ಭಾರಿ ತಿರುವು ನೀಡಿದ್ದಾರೆ.

    ಮಧ್ಯಪ್ರದೇಶದ ಉಜ್ಜೈನ್​ನಿಂದ ಕಾನ್ಪುರಕ್ಕೆ ವಿಕಾಸ್​ ದುಬೆಯನ್ನು ಕರೆತರುವಾಗ ಭಾರಿ ಮಳೆಯಾಗುತ್ತಿತ್ತು. ಕಾನ್ಪುರದ ಬಳಿ ಆತ ಹಾಗೂ ನಮ್ಮ ಸಿಬ್ಬಂದಿ ಇದ್ದ ವಾಹನ ಉರುಳಿತು. ಆಗ ಆತ ತಪ್ಪಿಸಿಕೊಳ್ಳಲು ಯತ್ನಿಸಿದ. ಶರಣಾಗುವಂತೆ ಎಷ್ಟೇ ಹೇಳಿದರೂ ಕೇಳದೆ ನಮ್ಮ ಸಿಬ್ಬಂದಿಯ ಪಿಸ್ತೂಲ್​ನಿಂದ ಗುಂಡಿನ ದಾಳಿ ಆರಂಭಿಸಿದ. ಆದ್ದರಿಂದ, ಆತನ ಮೇಲೆ ನಾವೂ ಗುಂಡು ಹಾರಿಸಬೇಕಾಯಿತು. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಕರೆತರಲಾಯಿತಾದರೂ ಆದ ಮೃತಪಟ್ಟ ಎಂದು ಪೊಲೀಸರು ಹೇಳಿದ್ದರು.

    ಆದರೆ, ಆಸ್ಪತ್ರೆಗೆ ಕರೆತರಲಾಗಿದ್ದ ವಿಕಾಸ್​ ದುಬೆಯನ್ನು ಪರೀಕ್ಷೆ ಮಾಡಿದೆ. ಆದರೆ ಆ ಅದಾಗಲೇ ಮೃತಪಟ್ಟಿದ್ದ ಎಂದು ವೈದ್ಯರು ಹೇಳಿದ್ದಾರೆ.

    ಸಿಬಿಎಸ್​ಇ ಪಠ್ಯ ಕಡಿತ: ಜೆಇಇ, ನೀಟ್​ ಪರೀಕ್ಷೆ ಮೇಲೂ ಪರಿಣಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts