ದಾವಣಗೆರೆ: ನಕಲಿ ವಿಜ್ಞಾನಿ ಎಂಬುದು ಬಯಲಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವ ಡ್ರೋನ್ ಪ್ರತಾಪ್ಗೆ ಹೀಗೆಲ್ಲಾ ಆಗುತ್ತೆ ಎಂದು ಈ ಮೊದಲೇ ತಿಳಿದಿತ್ತಂತೆ. ಈ ವಿಚಾರವನ್ನು ದಾವಣಗೆರೆಯ ಹೋಟೆಲ್ ಮಾಲೀಕರೊಬ್ಬರು ದಿಗ್ವಿಜಯ ನ್ಯೂಸ್ಗೆ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಮೀತಿ ಮೀರುತ್ತಿದ್ದೀರಿ ಜೋಕೆ ಎಂದು ಡ್ರೋನ್ ಪ್ರತಾಪ್ ಎಚ್ಚರಿಕೆ ನೀಡಿದ್ಯಾರಿಗೆ?
ಜುಲೈ 1ರಿಂದ 8ರವರೆಗೆ ದಾವಣಗೆರೆ ನಗರದ ಅರುಣಾ ಸರ್ಕಲ್ ಸಮೀಪದ ಶ್ರೀಗಂಧ ರೆಸಿಡೆನ್ಸಿಯಲ್ಲಿ ಪ್ರತಾಪ್ ತಂಗಿದ್ದರು. ಈ ವೇಳೆ ಮಾತನಾಡಿದ್ದ ಪ್ರತಾಪ್, ಪ್ರಧಾನಿ ನರೇಂದ್ರ ಮೋದಿ ಅವರು ಫೋನ್ ಮಾಡಿ ನನಗೆ ಕೆಲಸದ ಆಫರ್ ಕೊಟ್ಟಿದ್ದರು, ನಾನು ನಿರಾಕರಿಸಿದ್ದೆ. ಇನ್ನೊಂದು ವಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಟೀಕೆಗಳು ಬರುತ್ತವೆ ನೋಡ್ತಿರಿ ಎಂದು ಪ್ರತಾಪ್ ಹೇಳಿದ್ದಾಗಿ ಹೋಟೆಲ್ ಮಾಲೀಕ ವಿನಾಯಕ್ ಅವರು ಮಾಹಿತಿ ನೀಡಿದ್ದಾರೆ.
ಎಂಟು ದಿನಗಳು ಹೋಟೆಲ್ನಲ್ಲಿ ತಂಗಿದ್ದ ಪ್ರತಾಪ್, 8ನೇ ತಾರೀಖಿನಂದು ಬೆಂಗಳೂರಿಗೆ ಹೊರಟರು ಎಂದು ಮಾಲೀಕರು ತಿಳಿಸಿದ್ದಾರೆ. ಹೋಟೆಲ್ನಲ್ಲಿ ತಂಗಿದ್ದ ಸಮಯದ ನಡುವೆ ಪ್ರತಾಪ್, ಶಿವಮೊಗ್ಗ ಹಾಗೂ ರಾಣೇಬೆನ್ನೂರ್ಗೂ ಪ್ರಯಾಣ ಬೆಳೆಸಿದ್ದರಂತೆ. ಆದರೆ, ಯಾವ ಉದ್ದೇಶಕ್ಕೆ ತೆರಳಿದ್ದರು ಎಂಬುದನ್ನು ಬಹಿರಂಗಪಡಿಸಲಿಲ್ಲ ಎನ್ನತ್ತಾರೆ ವಿನಾಯಕ್.
ರಾತ್ರಿಯೆಲ್ಲ ವಿದೇಶಿಗರಿಗೆ ಆನ್ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತೇನೆ. ನಿದ್ರಿಸಲು ಸಮಯ ಇರುವುದಿಲ್ಲ. ನಾನು ಮಲಗುವುದು ಬೆಳಗ್ಗೆ 4 ಗಂಟೆಯಾಗುತ್ತದೆ ಎಂದೆಲ್ಲಾ ಹೋಟೆಲ್ ಮಾಲೀಕರ ಜತೆ ಪ್ರತಾಪ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದ ಡ್ರೋನ್ ಪ್ರತಾಪ್
ಮಾಲೀಕರ ಜತೆ ಕುಳಿತು ಊಟ ಮಾಡುವಾಗ ಈ ಎಲ್ಲ ವಿಚಾರಗಳು ಪ್ರಸ್ತಾಪವಾಗಿವೆ. ಅಲ್ಲದೆ, ವಿಡಿಯೋವೊಂದರಲ್ಲಿ ಹೋಟೆಲ್ ಬಗ್ಗೆಯೂ ಮಾತನಾಡಿರುವ ಪ್ರತಾಪ್, ಇಲ್ಲಿ ಎಲ್ಲಾ ಸೇವೆಗಳು ಚೆನ್ನಾಗಿವೆ. ಒಮ್ಮೆ ಭೇಟಿ ನೀಡಿ ಎಂತಲೂ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)
ದಿಢೀರನೇ ಡ್ರೋನ್ ಪ್ರತಾಪ್ ಇನ್ಸ್ಟಾಗ್ರಾಂ ಖಾತೆಯಲ್ಲಿ ವೈರಲ್ ಪೋಸ್ಟ್ ಮಾಯ: ಏನಿದರ ಮರ್ಮ!