More

    ಅಭಿವೃದ್ಧಿ ಕಾಮಗಾರಿಗೆ ಚಾಲನೆ

    ಮೈಸೂರು: 5 ಕೋಟಿ ರೂ. ವ್ಯಚ್ಚದಲ್ಲಿ ನಗರದ ವಾರ್ಡ್ ನಂ. 23ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿದರು. ವಾರ್ಡ್‌ನ ಬಿಡಾರ ಕೃಷ್ಣಪ್ಪ ರಸ್ತೆ ಮತ್ತು ಕೆಆರ್‌ಎಸ್ ರಸ್ತೆಯ ಮಾಂಡೋವಿ ಮೋಟಾರ್ಸ್‌ನಿಂದ ಮೈಸೂರು ಮೆಡಿಕಲ್ ಕಾಲೇಜು ವಿದ್ಯಾರ್ಥಿ ನಿಲಯದ ವರೆಗಿನ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದರು.


    ನಾರಾಯಣಶಾಸ್ತ್ರಿ ರಸ್ತೆ, ಡಿ. ಸುಬ್ಬಯ್ಯ ರಸ್ತೆ, ಶಿವಾಯನ ಮಠದ ರಸ್ತೆ, ದೇವರಾಜ ಶಾಲೆ ರಸ್ತೆ, ಗಾಡಿ ಲಕ್ಕಣ್ಣ ರಸ್ತೆ, ಹಳೇ ಬಂಡಿಕೇರಿ ರಸ್ತೆ ಮತ್ತು ಧನ್ವಂತ್ರಿ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಿದರು. ವಾರ್ಡ್ ವ್ಯಾಪ್ತಿಯ ಚರಂಡಿ ನಿರ್ಮಾಣ ಹಾಗೂ ಶಾಂತಲಾ ಚಿತ್ರ ಮಂದಿರದ ಪಕ್ಕದಲ್ಲಿ ಮಳೆನೀರು ಚರಂಡಿಗೆ ಗ್ರಿಲ್ ಅಳವಡಿಕೆ ಕಾಮಗಾರಿ ಚಾಲನೆ ನೀಡಿದರು.
    ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಮುಖಂಡರಾದ ರಾಜೇಂದ್ರ, ಪರಮೇಶ್ ಗೌಡ, ಪಾಪ್ಪಣ್ಣ, ವಿಘ್ನೇಶ್ವರ ಭಟ್, ಶರ್ಮ, ಹರ್ಷ, ಸುರೇಂದ್ರ, ಶ್ರೀನಿವಾಸ್, ಲಕ್ಷ್ಮೀ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts