More

    ಕಾರ್ಮಿಕ ಸಚಿವರಾಗಿ ಅತ್ಯುತ್ತಮ ಕೆಲಸ

    ಸಿಂಧನೂರ: ಡಾ.ಬಾಬು ಜಗಜೀವನ ರಾಂ ಆದರ್ಶಗಳು ಪಾಲನೆಯಾದಗ ಸುಭದ್ರ ಆಡಳಿತ ನೀಡಲು ಸಾಧ್ಯ ಎಂದು ತಹಸೀಲ್ದಾರ್ ಅರುಣ್ ದೇಸಾಯಿ ಹೇಳಿದರು.

    ನಗರದ ತಹಸಿಲ್ ಕಚೇರಿಯಲ್ಲಿ ಬುಧವಾರ ಡಾ.ಬಾಬು ಜಗಜೀವನ ರಾಂ 116 ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಾತಂತ್ರೃ ಸಂಗ್ರಾಮದಲ್ಲಿ ಜಗಜೀವನ್‌ರಾಂ ಪಾತ್ರ ಹಿರಿದಾಗಿದೆ. 1936 ರಲ್ಲಿ ಚುನಾಯಿತರಾದವರು 50 ಸತತ ವರ್ಷ ಅಧಿಕಾರದಲ್ಲಿದ್ದ ಏಕೈಕ ವ್ಯಕ್ತಿಯಾಗಿದ್ದಾರೆ. ಕಾರ್ಮಿಕ ಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿದ್ದರು. 30 ವರ್ಷ ಕೇಂದ್ರ ಸಚಿವರಾಗಿಯೂ ಐತಿಹಾಸಿಕ ಯೋಜನೆ ಜಾರಿಗೊಳಿಸಿದ ಕೀರ್ತಿ ಅವರದ್ದಾಗಿದೆ ಎಂದರು.


    ಇದಕ್ಕೂ ಮುನ್ನ ನಗರದ ಬಪ್ಪೂರ್ ಕ್ರಾಸ್ ಬಳಿಯ ಡಾ.ಬಾಬು ಜಗಜೀವನ್ ರಾಂ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಶಾಸಕ ವೆಂಕಟರಾವ ನಾಡಗೌಡ, ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಮರಿಯಪ್ಪ, ಆರ್.ಅಂಬ್ರೂಸ್, ಅಲ್ಲಮಪ್ರಭು ಪೂಜಾರಿ, ಅಮರೇಶ ಗಿರಿಜಾಲಿ, ಪಂಪಾಪತಿ, ಯಲ್ಲಪ್ಪ ಯದ್ದಲದೊಡ್ಡಿ, ಎಚ್.ಸೂಲಂಗಿ, ಧರ್ಮನಗೌಡ ಮಲ್ಕಾಪುರ, ಗುರುರಾಜ ಮುಕ್ಕುಂದಿ, ಖಾಜಿ ಮಲ್ಲಿಕ್, ಮಹೇಶ ಗೋಮರ್ಸಿ, ಸಂಗಮೇಶ, ಹನುಮೇಶ, ನಾಗರಾಜ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts