ಬಳ್ಳಾರಿ: ಆಂಧ್ರಪ್ರದೇಶದ ಡೋನ್ ಹಾಗೂ ಪೆಂಡೇಕಲ್ಲು ನಡುವೆ ಡಬಲಿಂಗ್ ಮಾರ್ಗಕ್ಕೆ ಸಂಬಂಧಿಸಿದ ತಾಂತ್ರಿಕ ಕಾಮಗಾರಿ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ, ಹೊಸಪೇಟೆ, ಕೊಪ್ಪಳ ಮಾರ್ಗದಲ್ಲಿ ಸಂಚರಿಸುವ ಹುಬ್ಬಳ್ಳಿ-ವಿಜಯವಾಡ ರೈಲಿನ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಹುಬ್ಬಳ್ಳಿಯಿಂದ ವಿಜಯವಾಡಕ್ಕೆ ತೆರಳುವ ರೈಲು ಫೆ.19ರಿಂದ ಮಾ.6ರವರೆಗೆ ಸಂಚರಿಸುವುದಿಲ್ಲ. ವಿಜಯವಾಡದಿಂದ ಹುಬ್ಬಳ್ಳಿಗೆ ತೆರಳುವ ರೈಲು ಫೆ.20ರಿಂದ ಮಾ.7ರವರೆಗೆ ಸಂಚರಿಸುವುದಿಲ್ಲ ಎಂದು ನೈರುತ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.