More

    ಜಿಲ್ಲಾದ್ಯಂತ ಹೈ ಅಲರ್ಟ್,ಸಿಎಂ ಭೇಟಿ

    ಚಿತ್ರದುರ್ಗ: ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದಿಂದಾಗಿ ಮೈಗೊಡವಿಕೊಂಡಿರುವ ಪೊಲೀಸರು ಜಿಲ್ಲೆಯ ಆಯಕಟ್ಟಿನ ಜಾಗಗಳಲ್ಲಿ ಸ್ಪೋಟ ಪತ್ತೆ ಶ್ವಾನದಳೊಂದಿಗೆ ಪೊಲೀಸರು ತಪಾಸಣೆ ನಡೆಸಿದ್ದಾರೆ. ಮಂಗಳೂರಲ್ಲಾದ ಘಟನೆಯಿಂದ ಪೊಲೀಸ್ ಇಲಾಖೆ ಎಲ್ಲ ಜಿಲ್ಲೆಗಳ ರಕ್ಷಣಾ ಧಿಕಾರಿಗಳಿಗೆ ಕಟ್ಟೆಚ್ಚರಕ್ಕೆ ಆದೇಶಿಸಿದ್ದು,ದುರ್ಗದ ಬಸ್,ರೈಲು ನಿಲ್ದಾಣಗಳು,ಮಾರುಕಟ್ಟೆ ಮೊದಲಾದ ಜನ ದಟ್ಟಣೆ ಪ್ರದೇಶಗಳಲ್ಲಿ ಪೊಲೀ ಸರು ತಪಾಸಣೆ ನಡೆಸಲು ಸೂಚಿಸಿರುವುದಾಗಿ ಎಸ್ಪಿ ಕೆ.ಪರಶುರಾಮ್ ತಿಳಿಸಿದ್ದಾರೆ.

    ಜಿಲ್ಲೆಯ ಎಲ್ಲೆಡೆ ನಿಗಾಕ್ಕೆ ಸೂಚಿಸಲಾಗಿದೆ. ಮಂಗಳವಾರದಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯಲ್ಲಿ ಕೈಗೊಂಡಿರುವ ಪ್ರವಾಸದ ಹಿನ್ನೆಲೆಯಲ್ಲಿ ಪೊಲೀಸರು ಮತ್ತಷ್ಟು ಎಚ್ಚರಿಕೆ ವಹಿಸಿದ್ದಾರೆ. ಬಾಗಿನ ಅರ್ಪಿಸುವ ವಾಣಿವಿಲಾಸ ಸಾಗರ,ರಾಣಿಕೆರೆ ಹಾಗೂ ಅ ವರ ಸಾರ್ವಜನಿಕ ಕಾರ‌್ಯಕ್ರಮಗಳಲ್ಲಿ ಬಿಗಿ ತಪಾಸಣೆ ನಡೆಸಿದ್ದು,ಬಂದೋಬಸ್ತ್‌ನ್ನು ಹೆಚ್ಚಿಸಲಾಗಿದೆ.

    ನಗರ,ಪಟ್ಟಣಗಳ ಲಾಡ್ಜ್‌ಗಳಲ್ಲಿ ತಂಗುವಂಥವರ ಪೂರ್ವಾಪರ ವಿಚಾರಿಸುವಂತೆ ಎಂದು ಲಾಡ್ಜ್‌ಗಳ ಮಾಲೀಕರಿಗೆ ಹಾಗೂ ಅಪರಿಚಿ ತರು ಮನೆ ಬಾಡಿಗೆಗೆಂದು ಕೇಳಿಕೊಂಡು ಬಂದಾಗ ಅಥವಾ ಬಾಡಿಗೆ ಮನೆಯನ್ನು ಪಡೆದಂಥ ಸಂದರ್ಭದಲ್ಲಿ ಅವರ ಸಂಪೂರ್ಣ ವಿವ ರ ಗೊತ್ತಿರಲಿ ಅಥವಾ ಮಾಹಿತಿ ನೀಡಿ ಎಂದು ಮನೆ ಮಾಲೀಕರಿಗೆ ಪೊಲೀಸರು ತಿಳಿಸಿದ್ದಾರೆನ್ನಲಾಗಿದೆ.
    —–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts