ಕೊಪ್ಪಳ: ತಾಲೂಕಿನ ಮುದ್ದಾಬಳ್ಳಿ, ಹ್ಯಾಟಿ ಗ್ರಾಮಗಳ ವ್ಯಾಪ್ತಿಯಲ್ಲಿ ರಾತ್ರೋರಾತ್ರಿ ರೈತರ 11 ಕ್ಕೂ ಹೆಚ್ಚು ರೈತರ ಪಂಪ್ ಸೆಟ್ ಕೇಬಲ್ ಕಳ್ಳತನವಾಗಿದೆ.
ರೈತರಾದ ಬಸಪ್ಪ, ಶಿವಪ್ಪ, ಮೈಲಾರಪ್ಪ, ಮಂಜುನಾಥ, ಗುತ್ತೂರಪ್ಪ ಸೇರಿ 11 ರೈತರ ಪಂಪಸೆಟ್ ಕೇಬಲ್ ಕಳ್ಳರು ಕದ್ದೊಯ್ದಿದ್ದಾರೆ. ರಾತ್ರಿ ವೇಳೆ ಕೈಚಳಕ ತೋರಿದ್ದಾರೆ. ಬೆಳಗಿನಜಾವ 3 ಗಂಟೆಗೆ ನೀರು ಹರಿಸಲು ರೈತರು ಹೊಲಕ್ಕೆ ತೆರಳಿದಾಗ ವಿಷಯ ಬೆಳಕಿಗೆ ಬಂದಿದೆ.
ಲಕ್ಷಾಂತರ ರೂ. ಮೌಲ್ಯದ ಕೇಬಲ್ ಕಳುವಾಗಿದ್ದು ರೈತರನ್ನು ಚಿಂತೆಗೀಡು ಮಾಡಿದೆ. ಬರ ಕಾರಣ ಬೆಳೆ ಒಣಗುತ್ತಿವೆ. ಹೀಗಾಗಿ ರೈತರು ಪಂಪ್ ಸೆಟ್ ನಂಬಿ ಬೆಳೆ ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ.
ವಿದ್ಯುತ್ ಸಹ ಕಣ್ಣಾಮುಚ್ಚಾಲೆ ಆಡುತ್ತಿದೆ. ಹೀಗಿರುವಾಗ ಕಳ್ಳತನ ನಡೆದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ನುರಿತ ಕಳ್ಳರೇ ಕದ್ದಿರುವ ಬಗ್ಗೆ ರೈತರು ಅನುಮಾನ ವ್ಯಕ್ತಪಡಿಸಿದ್ದಾರೆ. ತಕ್ಷಣ ಪೊಲೀಸರು ಖದೀಮರ ಜಾಲ ಪತ್ತೆ ಮಾಡಬೇಕು. ಉಳಿದ ರೈತರ ಆತಂಕ ದೂರ ಮಾಡಬೇಕೆಂದು ಒತ್ತಾಯಿಸಿದ್ದಾರೆ.