More

    ಮಹಿಳಾ ವ್ಯಾಪಾರಿಗಳಿಗೆ ಛತ್ರಿ ವಿತರಣೆ

    ಬಾಗಲಕೋಟೆ: ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಸುತ್ತಮುತ್ತಲು ಬಿಸಿಲಿಗೆ ಕೂತು ವ್ಯಾಪಾರ ಮಾಡುತ್ತಿರುವ ಮಹಿಳಾ ವ್ಯಾಪಾರಿಗಳಿಗೆ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಛತ್ರಿ ನೀಡಿದರು.

    ನಂತರ ಮಾತನಾಡಿದ ಅವರು, ಸ್ವಾವಲಂಬನೆ ಜೀವನ ಸಾಗಿಸುತ್ತಿರುವ ಮಹಿಳಾ ಸಹೋದರಿಯರಿಗೆ, ತಾಯಂದಿರು ಸಮಾಜಕ್ಕೆ ಮಾದರಿ. ಬಿಸಿಲಿನ ಝಳ ತೀವ್ರವಾಗಿದ್ದರೂ ಗಟ್ಟಿತನ ಮೆರೆದು ಸ್ಫೂರ್ತಿ ತುಂಬಿದ್ದಾರೆ. ಅವರಿಗೆ ಛತ್ರಿ ನೀಡುವ ಮೂಲಕ ಸಣ್ಣ ಸಹಾಯ ಮಾಡಿದ್ದೇವಷ್ಟೇ ಎಂದರು.

    ಮುಖಂಡರಾದ ರೇಣುಕಾ ನ್ಯಾಮಗೌಡರ, ಜಯಶ್ರೀ ಗುಳಬಾಳ, ಸಾವಿತ್ರಿ ಗಾಜಿ, ಅನ್ನಪೂರ್ಣ ಗೂಗ್ಯಾಳ, ಮಮ್ತಾಜ್ ಸುತಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts