ಆನಂದಪುರ: ಪ್ರತಿಮನೆ ಮನೆಗೂ ಮಂತ್ರಾಕ್ಷತೆ ಹಾಗೂ ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನಾ ಮಹೋತ್ಸವದ ಆಮಂತ್ರಣವನ್ನು ನೀಡಲಾಯಿತು.
ಜ.22ರಂದು ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ಬೃಹತ್ ಪರದೆ ಅಳವಡಿಸಿ, ನೇರ ಪ್ರಸಾರದ ವ್ಯವಸ್ಥೆ ಮಾಡಲಾಗುವುದು. ಪ್ರತಿ ಮನೆಯಲ್ಲೂ ಸಂಜೆ ಉತ್ತರ ದಿಕ್ಕಿನತ್ತ ಮುಖಮಾಡಿ ದೀಪ ಹಚ್ಚುವಂತೆ ಮನವಿ ಮಾಡಲಾಯಿತು.
ಪ್ರಮುಖರಾದ ರಂಗನಾಥ ಭಟ್, ರಮೇಶ್ ಜೋಯಿಸ್, ಗೋವಿಂದರಾಜ್, ವಾಸುದೇವ ಜೋಯಿಸ್, ನಾರಾಯಣ ಮಾಸ್ಟರ್, ಎಸ್.ಡಿ.ಚಂದ್ರಶೇಖರ, ಹೇಮಾ ರಘುಪತಿ, ನಾಗರತ್ನಾ, ಭಾರತಿ, ದೀಪಾ, ವಸುಧಾ ಪ್ರಭು ಇತರರಿದ್ದರು.