More

    ಅನಿರುದ್ಧ್ ಬಗೆಗಿನ ‘ಗಾಸಿಪ್’ ಗುಮಾನಿ ವಿಷಯ ಬಹಿರಂಗಪಡಿಸಿದ ನಿರ್ದೇಶಕ…

    ಬೆಂಗಳೂರು: ಜೊತೆಜೊತೆಯಲಿ ಧಾರಾವಾಹಿಯ ನಾಯಕ ನಟ ಅನಿರುದ್ಧ್ ಜತ್ಕರ್ ಅವರ ವಿರುದ್ಧ ಅದೇ ಸೀರಿಯಲ್‌ನ ನಿರ್ದೇಶಕ ಆರೂರ್ ಜಗದೀಶ್ ಆರೋಪಗಳ ಸುರಿಮಳೆಗೈದಿದ್ದಾರೆ. ಸೆಟ್‌ನಲ್ಲಿರುವವರೆಲ್ಲರೂ ತಮ್ಮ ಬಗ್ಗೆ ಬೆನ್ನ ಹಿಂದೆ ಏನೇನೋ ಮಾತನಾಡಿಕೊಳ್ಳುತ್ತಾರೆ, ಗಾಸಿಪ್ ಎಬ್ಬಿಸುತ್ತಿದ್ದಾರೆ ಎಂಬ ಗುಮಾನಿ ಅನಿರುದ್ಧ್ ಮನಸ್ಸಿನಲ್ಲಿ ಯಾವಾಗಲೂ ಇರುತ್ತಿತ್ತು ಎಂದು ಜಗದೀಶ್ ಬಹಿರಂಗಪಡಿಸಿದ್ದಾರೆ.

    ”ಇಡೀ ಧಾರಾವಾಹಿಯ ಶೇಕಡಾ 90ರಷ್ಟು ಕಥೆ ಇರೋದು ಅನಿರುದ್ಧ್ ಅವರದ್ದೇ (ಆರ್ಯವರ್ಧನ್ ಪಾತ್ರದ್ದೇ). ಅವರೇ ಮುನ್ನಡೆಸಿಕೊಂಡು ಹೋಗಬೇಕಾದ ಕಥೆ. ಇಲ್ಲಿ ನಮಗೆ ಬೇರೆ ಟ್ರ್ಯಾಕ್ ಇಲ್ಲವೇ ಇಲ್ಲ. ‘ಸೆಟ್‌ನಲ್ಲಿ ನನ್ನ ಬಗ್ಗೆ ತಂತ್ರಜ್ಞರು ಬೆನ್ನ ಹಿಂದೆ ಮಾತಾಡುತ್ತಾರೆ, ಗಾಸಿಪ್ ಮಾಡುತ್ತಿದ್ದಾರೆ’ ಅಂತ ಆರೋಪಿಸಿ ಐದಾರು ದಿನ ಅನಿರುದ್ಧ್ ಶೂಟಿಂಗ್‌ಗೇ ಬರಲಿಲ್ಲ. ಏನು ಮಾತಾಡ್ತಾರೆ, ಏನು ಗಾಸಿಪ್ ಅಂತ ನಿರ್ದೇಶಕನಾದ ನನಗೆ ಇವತ್ತಿಗೂ ಗೊತ್ತಿಲ್ಲ. ಆಮೇಲೆ ನಾನೇ ಇವರ ಮನೆಗೆ ಹೋಗಿ, ‘ನಿಮ್ಮ ಬಗ್ಗೆ ಯಾರೂ ಏನೂ ಮಾತಾಡಬಾರದು ಅಂತ ನಾನು ಎಲ್ಲರಿಗೂ ಹೇಳ್ತೀನಿ’ ಅಂತ ಹೇಳಿ ರಿಕ್ವೆಸ್ಟ್ ಮಾಡಿಬಂದೆ. ಅದೇ ಥರ ಎಲ್ಲರಿಗೂ ತಾಕೀತು ಮಾಡಿದೆ- ‘ಅವರ ಬಗ್ಗೆ ಎಲ್ಲೂ ಏನೂ ಮಾತಾಡಬೇಡಿ, ಸೆಟ್‌ನಲ್ಲಿ ಸುಮ್ಮನಿದ್ದುಬಿಡಿ, ನಮಗೆ ಕೆಲಸ ಆಗಬೇಕು’ ಅಂತ. ಯಾಕೆಂದರೆ ನಾನು ಈಗಾಗಲೇ ನಷ್ಟದಲ್ಲಿದ್ದೇನೆ. ಶೂಟಿಂಗ್ ಸೆಟ್‌ನಲ್ಲಿ ಒಮ್ಮೆ ಊಟ-ತಿಂಡಿ ವಿಷಯಕ್ಕೂ, ಡ್ರೈವರ್ – ಮ್ಯಾನೇಜರ್ ಮೇಲೂ ದೊಡ್ಡ ಗಲಾಟೆ ಮಾಡಿ ರಾದ್ಧಾಂತ ಮಾಡಿದರು. ಆ ದಿನವೂ ಅಷ್ಟೇ, ಶೂಟಿಂಗ್ ಬಿಟ್ಟು ಹೊರಡಲು ರೆಡಿಯಾಗಿದ್ದರು. ಆಗಲೂ ನಾವೇ ಸಾರಿ ಕೇಳಿ ಶೂಟಿಂಗ್ ಮಾಡ್ಸಿದ್ದಾಯ್ತು” ಎಂದು ಹೇಳಿದ್ದಾರೆ.

    ”ಸವದತ್ತಿ, ಯಲ್ಲಾಪುರ ಹೀಗೆ ಕೆಲವೆಡೆ ಹೊರಾಂಗಣ ಚಿತ್ರೀಕರಣ ಮಾಡುತ್ತಿದ್ದೆವು. ಹಾಗಿದ್ದಾಗ ಕೆಲವೊಮ್ಮೆ ಅಲ್ಲಿಂದ 2 ತಾಸುಗಳ ದೂರದ ಸ್ಥಳದಲ್ಲಿ ಶೂಟಿಂಗ್ ಶಿಫ್ಟ್ ಆಗುವುದಿರುತ್ತದೆ. ಬೆಳಗ್ಗೆ 6 ಗಂಟೆಗೆ ಶೂಟಿಂಗ್ ಇರುತ್ತಿತ್ತು. ನಮ್ಮದೇ ವಾಹನ, ನಮ್ಮದೇ ಚಾಲಕ ಇದ್ದರೂ ಅನಿರುದ್ಧ್ ಮಾತ್ರ ನಮ್ಮ ಜತೆ ರಾತ್ರಿ ಪ್ರಯಾಣ ಮಾಡುತ್ತಿರಲಿಲ್ಲ. ಬೆಳಗ್ಗೆ ಹೊರಡುತ್ತೇನೆ ಅನ್ನುತ್ತಿದ್ದರು” ಎಂದು ಆರೂರು ಜಗದೀಶ್ ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts