ಬೆಂಗಳೂರು: ದಿವಂಗತ ನಟ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ ‘ರಾಜಮಾರ್ತಾಂಡ‘ದ ಕೆಲಸಗಳು ಕೆಲ ಕಾರಣಗಳಿಂದ ವಿಳಂಬ ಗೊಂಡವು. ಆದರೆ, ನಟ ಚಿರಂಜೀವಿ ಸರ್ಜಾ ನಿಧನರಾದ ಎರಡು ವರ್ಷಗಳ ಬಳಿಕ, ಇದೀಗ ಆ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇನ್ನು, ಈ ಸಿನಿಮಾ ರಿಲೀಸ್ಗೆ ರೆಡಿಯಾಗುತ್ತಿರುವ ಹಿನ್ನಲೆ, ಚಿತ್ರತಂಡದಿಂದ ಹೊಸಕೆರೆಹಳ್ಳಿಯಲ್ಲಿರೋ ಶ್ರೀ ವರಸಿದ್ದಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಒಂದು ವಿಶೇಷ ಪೂಜೆ, ಗಣಹೋಮ ಮಾಡಿಸಲಾಯಿತು. ಇನ್ನು, ನಿರ್ದೇಶಕ ರಾಮ್ ನಾರಾಯಣ್ ಹಾಗೂ ನಿರ್ಮಾಪಕ ಶಿವಕುಮಾರ್ ಅವರ ಈ ಚಿತ್ರದ ವಿಶೇಷ ಪೂಜೆಗೆ ಬಂದಿದ್ದ ನಟ ಸುಂದರ್ ರಾಜ್ ಅವರು ಚಿತ್ರತಂಡಕ್ಕೆ ಶುಭಕೋರಿದರು.
ಹಾಗೂ, ಅವರ ಅಳಿಯ ಚಿರು ಸಿನಿಮಾ ಗೆಲ್ಲಬೇಕು, ಸಿನಿಮಾ ಗೆದ್ರೆ ಚಿರು ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದು ಮಾಧ್ಯಮದವರ ಮುಂದೆ ಹೇಳಿದ್ದರು. ವಿಶೇಷವಾಗಿ, ಅಪ್ಪನ ಕೊನೆಯ ಸಿನಿಮಾದ ಮೂಲಕವೇ ಪುತ್ರ ರಾಯನ್ ರಾಜ್ ಸರ್ಜಾ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಹೌದು, ಅಪ್ಪನ ಕೊನೆಯ ಚಿತ್ರ ‘ರಾಜಮಾರ್ತಾಂಡ‘ ಸಿನಿಮಾದಲ್ಲಿ ರಾಯನ್ ರಾಜ್ ಸರ್ಜಾ ಒಂದು ಮುಖ್ಯ ಅತಿಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಹಾಗಾಗಿ, ಬೆಳ್ಳಿ ಪರದೆಯ ಮೇಲೆ ರಾಯನ್ ರಾಜ್ ಸರ್ಜಾ ಹೇಗೆ ಕಾಣ್ತಾರೆ ಅನ್ನೋ ಕೂತೂಹಲ ಅಭಿಮಾನಿಗಳಲ್ಲಿ ಮೂಡಿದ್ದು, ಮೇ ತಿಂಗಳಿನಲ್ಲಿ ಈ ಸಿನಿಮಾ ತೆರೆಗೆ ಬಂದರೆ ಗೊತ್ತಾಗುತ್ತೆ.
ಈ ನಡುವೆ, ನಟ ಚಿರಂಜೀವಿ ಸರ್ಜಾ ಅವರು ‘ರಾಜಮಾರ್ತಾಂಡ‘ ಸಿನಿಮಾದ ಶೂಟಿಂಗ್ ಮುಗಿಸಿದರೂ, ಅವರು ಚಿತ್ರದ ಡಬ್ಬಿಂಗ್ ಕೆಲಸ ಮುಗಿಸುವ ಮೊದಲೇ ನಿಧನರಾದರು. ಹೀಗಾಗಿ, ಸದ್ಯ ನಟ ಚಿರಂಜೀವಿ ಸರ್ಜಾ ಅವರ ಪಾತ್ರಕ್ಕೆ ಈ ಸಿನಿಮಾದಲ್ಲಿ ಅವರ ತಮ್ಮ ನಟ ಧ್ರುವ ಸರ್ಜಾ ಅವರು ಧ್ವನಿಯಾಗಿದ್ದಾರೆ ಎನ್ನಲಾಗಿದೆ. ಹಾಗಾದರೆ, ತಮ್ಮನ ಧ್ವನಿಯಲ್ಲಿ, ಪುತ್ರನ ಜತೆಗೆ ನಟ ಚಿರಂಜೀವಿ ಸರ್ಜಾ ಕೊನೆಯ ಬಾರಿ ದೊಡ್ಡ ಪರದೆಯ ಮೇಲೆ ಹೇಗೆ ಮಿಂಚಲಿದ್ದಾರೆ ಎನ್ನುವ ಕುತೂಹಲ ಹೆಚ್ಚಿಸುವುದರ ಜತೆಗೆ ಅಭಿಮಾನಿಗಳ ಸಂಭ್ರಮವನ್ನು ದುಪ್ಪಟ್ಟು ಮಾಡಲಿದೆ.
ಚಿತ್ರಮಂದಿರಗಳ ಮಾಲೀಕರಿಂದಲೂ ತಿರಸ್ಕರಿಸಲ್ಪಟ್ಟ RGV ಸಿನಿಮಾ! ‘ಡೇಂಜರಸ್’ಗೆ ನೋ ರಿಲೀಸ್; ಕಾರಣ?
ಕನಸ್ಸಿನ ಮನೆಯ ಗುಟ್ಟು ಬಿಚ್ಚಿಟ್ಟ ನಟಿ ಪ್ರಿಯಾಂಕಾ ತಿಮ್ಮೇಶ್; ಹೇಗಿರಬೇಕಂತೆ ಗೊತ್ತಾ?
ಕೇವಲ ಆರು ದಿನಗಳಲ್ಲಿ ಪುನೀತ್ ರಾಜ್ಕುಮಾರ್ ‘ಜೇಮ್ಸ್’ ಸಿನಿಮಾ ಒಟಿಟಿಯಲ್ಲಿ