More

    ಸಿದ್ಧಾಂತ ಒಪ್ಪಿ ಜೆಡಿಎಸ್ ಸೇರ್ಪಡೆ

    ದೇವರಹಿಪ್ಪರಗಿ: ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ದೀನ-ದಲಿತರು, ಬಡವರು ಹಾಗೂ ನಾಡಿನ ರೈತರಿಗಾಗಿ ಕುಮಾರಸ್ವಾಮಿ ಅವರು ಮಾಡಿದ ಸೇವೆಯನ್ನು ಮಚ್ಚಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಹಲವು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಮುಖಂಡ ರಾಜುಗೌಡ ಪಾಟೀಲ (ಕುದರಿಸಾಲೋಟಗಿ) ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

    ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಿಗಿ ಮಾತನಾಡಿ, ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ನಮ್ಮ ಪಕ್ಷಕ್ಕೆ ಬರುತ್ತಿರುವ ಕಾರ್ಯಕರ್ತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ತಾಪಂ, ಜಿಪಂ ಸೇರಿದಂತೆ ಸ್ಥಳೀಯ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ನಾಯಕರು ಶ್ರಮಿಸಲಿದ್ದಾರೆ ಎಂದರು. ಜಿಲ್ಲಾ ಉಪಾಧ್ಯಕ್ಷ ರಿಯಾಜ ಯಲಗಾರ, ತಾಲೂಕು ಅಧ್ಯಕ್ಷ ಸಾಯಬಣ್ಣ ಬಾಗೇವಾಡಿ, ಯುವ ಘಟಕದ ಅಧ್ಯಕ್ಷ ಮುನ್ನಾ ಮಳಖೇಡ ಮಾತನಾಡಿದರು.

    ಭಾಸ್ಕರ ಗುಡಿಮನಿ, ರಾಘವೇಂದ್ರ ಗುಡಿಮನಿ, ಯಾಸೀನ ಹಚ್ಯಾಳ, ಹಣಮಂತ ಹಳ್ಳದಮನಿ, ಸುಭಾಷ ನಾಟೀಕಾರ, ಅಬುಬಕರ ಯಲಗಾರ, ದಾದಾಗೌಡ ಪಾಟೀಲ, ಅಬುಬಕರ ನಾಯ್ಕೋಡಿ, ನಿತಿನ ಗುಡಿಮನಿ, ಪ್ರಶಾಂತ ದೊಡಮನಿ, ಸಾಯಬಣ್ಣ ದಳಪತಿ, ರವಿ ಸಿಂಗೆ, ಹರೀಶ ಸಾಲೋಟಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts