More

    ಪುನೀತ್‌ಗೆ ಅಭಿಮಾನಿಗಳಿಂದ ಶ್ರದ್ಧಾಂಜಲಿ, ಸುಂಕೇಶ್ವರಹಾಳ, ಜಾಲಹಳ್ಳಿಯಲ್ಲೂ ಗೌರವ

    ದೇವದುರ್ಗ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪುನೀತ್ ರಾಜ್‌ಕುಮಾರ ಅಭಿಮಾನಿ ಬಳಗದಿಂದ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದಲ್ಲದೆ ಪಟ್ಟಣದ ಜೆಪಿ ವೃತ್ತ, ಮಹಾತ್ಮಗಾಂಧೀಜಿ ವೃತ್ತದಲ್ಲಿ ಡಾ.ರಾಜ್‌ಕುಮಾರ ಅಭಿಮಾನಿ ಬಳಗದಿಂದ, ಬಸವೇಶ್ವರ ವೃತ್ತದಲ್ಲೂ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ಇದಲ್ಲದೆ ಜಾಲಹಳ್ಳಿ ಬಸ್ ನಿಲ್ದಾಣ, ಗಬ್ಬೂರು, ಗಲಗ, ಮುಂಡರಗಿ ಸೇರಿ ತಾಲೂಕಾದ್ಯಂತ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿ ಕಂಬನಿ ಮಿಡಿದರು. ಮುಖಂಡರಾದ ನಿಂಗು ಕಟ್ಟಿಕರ್, ಅಂಜು ಚಂದನ್ ಕೇರಿ, ಮೋಹನ್ ಬಲ್ಲಿದವ್, ಸಂತೋಷ್, ರವಿಕುಮಾರ ಬಾಗೂರು, ರಂಗನಾಥ ಅಬಕಾರಿ, ಹನುಮಂತ ದೊರೆ, ರಜನಿಕಾಂತ್ ಇತರರಿದ್ದರು.

    ಸಮುದಾಯ ಗೌರವ: ಪಟ್ಟಣದ ಆರ್ಯ ಈಡಿಗ ಸಮುದಾಯದ ತಾಲೂಕು ಕಚೇರಿಯಲ್ಲಿ ಪುನೀತ್ ರಾಜ್‌ಕುಮಾರ ನಿಧನಕ್ಕೆ ಈಡಿಗ ಸಮುದಾಯದಿಂದ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಮುದಾಯ ಮುಖ್ಯಸ್ಥ ಶರಣಗೌಡ ಸುಂಕೇಶ್ವರಹಾಳ ಮಾತನಾಡಿ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ ಕೇವಲ ನಟ ಮಾತ್ರವಲ್ಲ ನಿಜ ಜೀವನದಲ್ಲಿ ಅವರೊಬ್ಬ ಆದರ್ಶ ವ್ಯಕ್ತಿಯಾಗಿದ್ದರು. ಸಾವಿರಾರು ಬಡವರಿಗೆ ಅನ್ನ, ಆಶ್ರಯ, ಅಕ್ಷರ ನೀಡುತ್ತಿದ್ದರು. ಅವರ ಅಕಾಲಿಕ ನಿಧನ ಚಿತ್ರರಂಗಕ್ಕೆ ಮಾತ್ರವಲ್ಲ, ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ಮುಖಂಡರಾದ ಅಮರೇಶ ಗುತ್ತೇದಾರ್ ಇಟಗಿ, ಗದ್ದೆಪ್ಪ ಗುತ್ತೇದಾರ್, ರಂಗನಾಥ ಅಬಕಾರಿ, ರಾಘವೇಂದ್ರ ಅಬಕಾರಿ, ಮಂಜುನಾಥ ಭಂಡಾರಿ, ಬಸವರಾಜ ಜಾಗಟಗಲ್, ಅಂಜನೇಯ ಬಿ.ಗಣೇಕಲ್, ಶಿವುಕುಮಾರ ಹೇಮನಾಳ, ಚಿತ್ರಶೇಖರ ಮಲದಕಲ್, ರಂಗನಾಥ ಇಂಜಿನಿಯರ್ ಇದ್ದರು.

    ಅಪ್ಪು ಅಭಿಮಾನಿ ಆತ್ಮಹತ್ಯೆಗೆ ಯತ್ನ, ಟ್ಯಾಟೋ ಹಾಕಿಸಿಕೊಂಡು ಪ್ರೀತಿ ವ್ಯಕ್ತ
    ಸಿಂಧನೂರು: ನಟ ಪುನೀತ್ ರಾಜಕುಮಾರ ಅಕಾಲಿಕ ಮರಣ ತಾಳದೆ ತಾಲೂಕಿನಲ್ಲಿ ಶುಕ್ರವಾರ ಇಬ್ಬರು ಯುವಕರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾರಾಪುರ ಗ್ರಾಮದ ಬಸನಗೌಡ (22) ಹಾಗೂ ಯಾಪಲಪರ್ವಿ ಮಹ್ಮದ್‌ರಫೀ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಟ್ಯಾಟೂ ಹಾಕಿಸಿಕೊಂಡು ಅಭಿಮಾನ
    ನಗರದಲ್ಲಿ ಪುನೀತ್ ರಾಜಕುಮಾರ ಸಾವಿನ ಸುದ್ದಿ ತಿಳಿದು ಅಭಿಮಾನಿಯೊಬ್ಬ ತನ್ನ ಎದೆಮೇಲೆ ಪುನೀತ್ ಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಹಟ್ಟಿಚಿನ್ನದಗಣಿಯ ಲಿಂಗರಾಜ, ಪುನೀತ್ ಟ್ಯಾಟೂ ಹಾಕಿಸಿಕೊಂಡು ಅಂತಿಮ ವಿದಾಯ ಹೇಳಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts