More

    ಎಲ್ಲ ಸಮಸ್ಯೆಗಳಿಗೆ ಪಂಚರತ್ನ ಪರಿಹಾರ

    ದೇವದುರ್ಗ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಐದು ಪ್ರಮುಖ ಯೋಜನೆಗಳ ಮೂಲಕ ರಾಜ್ಯಾದ್ಯಂತ ಪಂಚರತ್ನ ಯಾತ್ರೆ ಮಾಡುತ್ತಿದ್ದು, ಇದರಲ್ಲಿ ರಾಜ್ಯದ ಬಹುತೇಕ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ಕಲ್ಯಾಣ ಕರ್ನಾಟಕ ಜೆಡಿಎಸ್ ವೀಕ್ಷಕಿ ಕರೆಮ್ಮ ಜಿ.ನಾಯಕ ಹೇಳಿದರು.

    ತಾಲೂಕಿನ ಯರಮಸಾಳದಲ್ಲಿ ಜೆಡಿಎಸ್‌ನಿಂದ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಪಂಚರತ್ನ ಯೋಜನೆಯಡಿ ಮೊದಲ ಬೇಡಿಕೆಯೇ ರೈತರ ಸಮಸ್ಯೆಗಳಾಗಿವೆ. ನನೆಗುದಿಗೆ ಬಿದ್ದ ಎಲ್ಲ ನೀರಾವರಿ ಯೋಜನೆಗಳನ್ನು ಶೀಘ್ರವೇ ಪೂರ್ಣಗೊಳಿಸಿ ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸುವುದು. ಸರ್ವರಿಗೂ ಉಚಿತ ಗುಣಮಟ್ಟದ ಶಿಕ್ಷಣ, ಆರೋಗ್ಯ, ಸೂರು ಒದಗಿಸುವುದು. ಮಹಿಳೆಯರ ಭದ್ರತೆಗೆ ವಿಶೇಷ ಆದ್ಯತೆ, ಮೂಲಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ಎಂದು ತಿಳಿಸಿದರು.

    ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ಜಾಗಟಗಲ್ ಮಾತನಾಡಿ, ಬಿಜೆಪಿ ಭದ್ರಕೋಟೆ ಯರಮಸಾಳದಲ್ಲಿ ನೂರಾರು ಸಮಸ್ಯೆಗಳಿದ್ದು, ಅವೆಲ್ಲವನ್ನೂ ಜನರು ನಮ್ಮ ಬಳಿ ಹೇಳಿಕೊಳ್ಳುತ್ತಿದ್ದಾರೆ. ಇದು ಶಾಸಕರು ಮಾಡಿರುವ ಅಭಿವೃದ್ಧಿಯ ಪರಿ ಎಂದು ದೂರಿದರು.

    ಇದೇ ಸಂದರ್ಭದಲ್ಲಿ ವಿವಿಧ ಪಕ್ಷದ ನೂರಾರು ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆಯಾದರು. ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಮೂಡಲಗುಂಡ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಮಯೂರ ಸ್ವಾಮಿ, ಬಸವರಾಜ್, ಮಾಳಿಂಗರಾಯ, ಸಣ್ಣ ಮಾಳಿಂಗರಾಯ, ರಂಗಪ್ಪ ಹೊನ್ನಕುಣಿ, ಅವಳೆಪ್ಪ ಪೂಜಾರಿ, ಹೊನ್ನಪ್ಪ ಸಾಹೂರು, ಸಿದ್ದಯ್ಯ ಸಾಹೂರ್ ಇತರರಿದ್ದರು.

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts