More

    ಹಸಿದವರ ಹೊಟ್ಟೆ ತುಂಬಿಸಲು ಹೋದ ಯುವಕರಿಬ್ಬರು ದುರ್ಮರಣ: ಜವರಾಯನಂತೆ ಬಂದೆರಗಿದ್ದ ಕಾರು ಪತ್ತೆ

    ಬೆಂಗಳೂರು: ಹಿಟ್​ ಆ್ಯಂಡ್​ ರನ್​ಗೆ ಯುವಕರಿಬ್ಬರು ಮಂಗಳವಾರ ರಾತ್ರಿ ಬಲಿಯಾಗಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಅಪಘಾತದ ದೃಶ್ಯ ಬೆಚ್ಚಿಬೀಳಿಸುವಂತಿದೆ.

    ಮಂಜುನಾಥ್​ ನಗರದ ನಿವಾಸಿಗಳಾದ ಗೌತಮ್ ಮತ್ತು ಶ್ರೀಕಾಂತ ಮೃತರು. ಸ್ವಿಗ್ಗಿ ಡೆಲಿವರಿ ಬಾಯ್​​ಗಳಾಗಿ ಕೆಲಸ ಮಾಡುತ್ತಿದ್ದ ಇವರು ನಿನ್ನೆ ರಾತ್ರಿ, ಜಾಲಹಳ್ಳಿ ವಿಲೇಜ್ ರಸ್ತೆಯ ಅಪಾರ್ಟ್ಮೆಂಟ್​ನಲ್ಲಿ ಊಟ ಡೆಲಿವರಿ ಕೊಟ್ಟು ವಾಪಸ್​ ಹೊರಡಲೆಂದು ಬೈಕ್​ ಹತ್ತಿದ ಕೆಲವೇ ಕ್ಷಣದಲ್ಲಿ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್​ನಿಂದ ಮೇಲಕ್ಕೆ ಹಾರಿ ಕೆಳಗೆ ಬಿದ್ದ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಹಸಿದವರ ಹೊಟ್ಟೆ ತುಂಬಿಸಲು ಹೋಗಿದ್ದವರು ಮಾರ್ಗಮಧ್ಯೆ ದುರ್ಮರಣಕ್ಕೀಡಾದ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಘಟನೆ ಸಂಭವಿಸಿ 24 ತಾಸು ಮುಗಿಯುವಲ್ಲಿ ಆ ಕಾರನ್ನು ಪತ್ತೆ ಹಚ್ಚಿದ್ದಾರೆ.

    ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಿಟ್ ಆ್ಯಂಡ್ ರನ್ ಕೇಸ್​ನ ಬೆನ್ನುಬಿದ್ದ ಪೊಲೀಸರಿಗೆ ಅಪಘಾತ ನಡೆದ ಸ್ಥಳದಲ್ಲಿ ನಂಬರ್ ಪ್ಲೇಟ್​ನ ಚೂರು ಸಿಕ್ಕಿತ್ತು. ಇದನ್ನೇ ಇಟ್ಟುಕೊಂಡು ಕಾರಿನ ನಂಬರ್ ಪತ್ತೆ ಹಚ್ಚಿದ್ದಾರೆ. ಸುಮಾರು 15 ಕಾರುಗಳ ಪರಿಶೀಲನೆ ಬಳಿಕ ಅಪಘಾತವೆಸಗಿದ ಕಾರಿನ ಮಾಲೀಕ ಸಿಕ್ಕಿದ್ದಾನೆ. ಮಾದನಾಯಕನಹಳ್ಳಿಯ ಭರತ್ ಎಂಬಾತನಿಗೆ ಈ ಕಾರು ಸೇರಿದ್ದು, ಅಪಘಾತದ ಬಳಿಕ ಮಾದಾವರ ಬಳಿ ಕಾರು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

    ನನ್ನ ಕಾರನ್ನು ಸ್ನೇಹಿತ ತೆಗೆದುಕೊಂಡು ಹೋಗಿದ್ದ ಎಂದು ಮಾಲೀಕ ಭರತ್, ಯಶವಂತಪುರ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಹೇಳಿಕೆ ನೀಡಿದ್ದಾರೆ. ಕಾರು ಚಾಲಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಅಂದು ಪೊಲೀಸರು ಅವನನ್ನ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರು, ಆಗ ಸಹಾಯಕ್ಕೆ ನಾನೇ ಬಂದೆ… ಇದನ್ನ ದರ್ಶನ್​ ನೆನೆಯಲಿ

    ರಾಜ್ಯದಲ್ಲಿ ಈ ಭಾರಿ 110 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೆಚ್ಚಳ, 600 ತಾಪಂ ಕ್ಷೇತ್ರಗಳು ರದ್ದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts