‘ರಾಮ್ ಲೀಲಾ’ ರಿಲೀಸ್ ಆದ ಬಳಿಕ ರಣವೀರ್ ಸಿಂಗ್ ಅವರು ದೀಪಿಕಾಗೆ ಪ್ರಪೋಸ್ ಮಾಡಿದ್ದರು. ದ್ವೀಪ ಒಂದಕ್ಕೆ ಕರೆದುಕೊಂಡು ಹೋಗಿ ರಿಂಗ್ ನೀಡಿ ರಣವೀರ್ ಮದುವೆ ಪ್ರಪೋಸಲ್ ಇಟ್ಟಿದ್ದರು. ನಂತರ ಮನೆಯವರನ್ನು ಒಪ್ಪಿಸಿ ಇವರು ಮದುವೆ ಆಗಿದ್ದು, ಇದೀಗ ದೀಪಿಕಾ ಕಾಫಿ ವಿತ್ ಕರಣ್ ಶೋನಲ್ಲಿ ನೀಡಿರುವ ಹೇಳಿಕೆ ರಣ್ವೀರ್ ಸಿಂಗ್ಗೆ ಸಿಟ್ಟು ತರಿಸಿದೆ ಎನ್ನಲಾಗುತ್ತಿದೆ.
ಶೋ ಮಧ್ಯೆ ಕರಣ್ ಜೋಹರ್ ನೀವಿಬ್ಬರೂ ಯಾವಾಗ ರಿಲೇಶನ್ಶಿಪ್ನಲ್ಲಿ ಇದ್ದೀರಿ ಅನ್ನೋದು ಇಬ್ಬರಿಗೂ ಖಚಿತವಾಯಿತು ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ದೀಪಿಕಾ ಉತ್ತರಿಸಿದ್ದಾರೆ. ‘ಕೆಲವು ಕಾಂಪ್ಲಿಕೇಟೆಡ್ ರಿಲೇಶನ್ಶಿಪ್ನಿಂದ ನಾನು ಆಗಷ್ಟೇ ಹೊರ ಬರೋಕೆ ಪ್ರಯತ್ನಿಸುತ್ತಿದೆ. ನಾನು ಯಾವುದೇ ರಿಲೇಶನ್ಶಿಪ್ನಲ್ಲಿ ಇರಬಾರದು ಎಂದು ನಿರ್ಧರಿಸಿದ್ದೆ.
ಅಂತಹ ದಿನಗಳನ್ನ ಕಳೆಯುವಾಗ ರಣ್ವೀರ್ ನನ್ನ ಜೀವನದಲ್ಲಿ ಆಗಮಿಸಿದ್ರು. ಆದ್ರೆ ನಾನು ಅವರನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ. ಮತ್ತು ನಮ್ಮಿಬ್ಬರ ನಡುಚವೆ ಯಾವುದೇ ಅಂದ್ರೆ ಮದುವೆಯಾಗುವ ಕಮಿಟ್ಮೆಂಟ್ ಇರಲಿಲ್ಲ. ನಮ್ಮಿಬ್ಬರ ಮಧ್ಯೆ ನಿಜವಾದ ಕಮಿಟ್ಮೆಂಟ್ ಇರಲಿಲ್ಲ. ನಾನು ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದೆ. ಆದರೆ, ರಣವೀರ್ ಸಿಂಗ್ ಅಷ್ಟು ಎಗ್ಸೈಟಿಂಗ್ ಎಂದು ಯಾರೂ ಅನಿಸಲಿಲ್ಲ. ಹಾಗಾಗಿ ನಾನು ಬೇರೆ ಹುಡುಗರನ್ನ ಮೀಟ್ ಮಾಡುತ್ತಿದ್ದರೂ ಮರಳಿ ರಣ್ವೀರ್ ಬಳಿಗೇ ಬರುತ್ತಿದ್ದೆ ಎಂದಿದ್ದಾರೆ ದೀಪಿಕಾ.
ಇನ್ನು ಈ ಪ್ರಶ್ನೆಗೆ ರಣ್ವೀರ್ ಸಿಂಗ್ ಸಹ ಉತ್ತರಿಸಿದ್ದು ಏನು ಹೇಲಿದ್ದಾರೆ ಗೊತ್ತಾ?
ನಾವು ಡೇಟ್ಗೆ ಹೋಗುತ್ತಿದ್ದೆವು. ಒಟ್ಟಿಗೆ ರಜಾ ಕಳೆದಾಗ, ಹೊಸ ವರ್ಷ ಆಚರಿಸಿದಾಗ ಒಟ್ಟಿಗೆ ಇದ್ದ ಭಾವನೆ ಬರುತ್ತದೆ. ಮೊದಲ ಆರು ತಿಂಗಳಲ್ಲಿ ಕೆಲವರು ದೀಪಿಕಾನ ಮದುವೆ ಆಗಲು ಸತತ ಪ್ರಯತ್ನಗಳನ್ನ ನಡೆಸುತ್ತಿದ್ದರು’ ಎಂದಿದ್ದಾರೆ ರಣವೀರ್ ಸಿಂಗ್. ಇನ್ನು ದೀಪಿಕಾ ಮೀಟ್ ಮಾಡುತ್ತಿದ್ದ ಆ ಮೂವರು ಯಾರು ಎಂಬ ಪ್ರಶ್ನೆ ಬಂದಾಗ ರಣ್ವೀರ್ಗೆ ಕೋಪ ಬಂದಂತಿದೆ.
‘ನಾನು ಬೇರೆಯವರನ್ನ ಭೇಟಿ ಮಾಡುತ್ತಿದ್ದೆ ಮತ್ತೆ ಮರಳಿ ರಣವೀರ್ ಬಳಿ ಬರುತ್ತಿದೆ ಎಂದು ಈಗತಾನೇ ನೀನು ಹೇಳಿದೆ. ಈಗ ಅದು ನೆನಪಿಲ್ಲವೇ?’ ಎಂದು ರಣವೀರ್ ಸಿಂಗ್ ಪ್ರಶ್ನೆ ಮಾಡಿದರು. ದೀಪಿಕಾ ಕಡೆಯಿಂದ ‘ಇಲ್ಲ’ ಎನ್ನುವ ಉತ್ತರ ಬಂತು. ‘ನನಗೆ ಸರಿಯಾಗಿ ನೆನಪಿದೆ’ ಎಂದರು ರಣವೀರ್ ಸಿಂಗ್ ಸಿಟ್ಟಲ್ಲೇ ಹೇಳಿದ್ದಾರೆ.