ಯಲ್ಲಾಪುರ: ವಾಹನವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಳ್ಳದಲ್ಲಿ ಬಿದ್ದು ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ಪಟ್ಟಣದ ಹಿಂದು ರುದ್ರಭೂಮಿ ಬಳಿ ಶನಿವಾರ ರಾತ್ರಿ ನಡೆದಿದೆ. ಕೋಲ್ಕತ್ತಾ ನಿವಾಸಿ ಸಯಾನ್ ಸ್ವಪನ್ ಬ್ಯಾನರ್ಜಿ (36) ಮೃತಪಟ್ಟ ಬೈಕ್ ಸವಾರ.
ರಾಯಲ್ ಎನ್ಫೀಲ್ಡ್ ಬೈಕ್ ಮೇಲೆ ಕಲಘಟಗಿಯಿಂದ ಯಲ್ಲಾಪುರ ಕಡೆಗೆ ಬರುವಾಗ ಬಿಸಗೋಡ ಕ್ರಾಸ್ ಬಳಿಯ ಹಿಂದು ರುದ್ರಭೂಮಿ ಸಮೀಪ ವಾಹನ ಡಿಕ್ಕಿ ಹೊಡೆದಿದೆ. ಆಗ ಸಯಾನ್ ಬೈಕ್ ಸಮೇತ ಹೆದ್ದಾರಿ ಪಕ್ಕದ ಹಳ್ಳದಲ್ಲಿ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.