More

    ವಾಹನ ಡಿಕ್ಕಿಯಾಗಿ ಕೋಲ್ಕತದ ನಿವಾಸಿ ಸಾವು

    ಯಲ್ಲಾಪುರ: ವಾಹನವೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಳ್ಳದಲ್ಲಿ ಬಿದ್ದು ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ಪಟ್ಟಣದ ಹಿಂದು ರುದ್ರಭೂಮಿ ಬಳಿ ಶನಿವಾರ ರಾತ್ರಿ ನಡೆದಿದೆ. ಕೋಲ್ಕತ್ತಾ ನಿವಾಸಿ ಸಯಾನ್ ಸ್ವಪನ್ ಬ್ಯಾನರ್ಜಿ (36) ಮೃತಪಟ್ಟ ಬೈಕ್ ಸವಾರ.
    ರಾಯಲ್ ಎನ್​ಫೀಲ್ಡ್ ಬೈಕ್ ಮೇಲೆ ಕಲಘಟಗಿಯಿಂದ ಯಲ್ಲಾಪುರ ಕಡೆಗೆ ಬರುವಾಗ ಬಿಸಗೋಡ ಕ್ರಾಸ್ ಬಳಿಯ ಹಿಂದು ರುದ್ರಭೂಮಿ ಸಮೀಪ ವಾಹನ ಡಿಕ್ಕಿ ಹೊಡೆದಿದೆ. ಆಗ ಸಯಾನ್ ಬೈಕ್ ಸಮೇತ ಹೆದ್ದಾರಿ ಪಕ್ಕದ ಹಳ್ಳದಲ್ಲಿ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts