More

    ಹೊಸತನ ರೂಪಿಸುವ ಪ್ರಯತ್ನ ನಡೆಯಲಿ

    ದಾವಣಗೆರೆ: ಮಾರುಕಟ್ಟೆಯಲ್ಲಿ ಪರಿಸರ ಪ್ರಜ್ಞೆ ಜತೆಗೆ ಹೊಸತನ ರೂಪಿಸುವ ಪ್ರಯತ್ನಗಳು ನಡೆಯಬೇಕಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ.ಎಂ. ಮುನಿನಾರಾಯಣಪ್ಪ ಹೇಳಿದರು.
     ದಾವಣಗೆರೆ ವಿಶ್ವವಿದ್ಯಾನಿಲಯ ವಾಣಿಜ್ಯ ಅಧ್ಯಯನ ವಿಭಾಗದಿಂದ ನವದೆಹಲಿಯ ಐಸಿಎಸ್‌ಎಸ್‌ಆರ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ಜಾಗತಿಕ ವ್ಯಾಪಾರಕ್ಕಾಗಿ ಸುಸ್ಥಿರ ನವೀನ ಕಲ್ಪನೆಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
     ಸ್ಥುಸ್ಥಿರ ಅಭಿವೃದ್ಧಿಯಲ್ಲಿ ತಂತ್ರಜ್ಞಾನ ಬಳಕೆ ಅನಿವಾರ್ಯ. ಕೈಗಾರಿಕೆ ಮರುರೂಪಿಸುವ ಮತ್ತು ಪರಿಸರ ಪ್ರಜ್ಞೆಯ ಗ್ರಾಹಕರೊಂದಿಗೆ ಕಾರ್ಯತಂತ್ರ ಸಿದ್ಧಪಡಿಸಬೇಕಾಗಿದೆ. ಇಂಟರ್‌ನೆಟ್ ಕೃತಕ ಬುದ್ಧಿಮತ್ತೆ, ಡೇಟಾ ಅನಾಲಿಟಿಕ್ಸ್‌ನಂತಹ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಉತ್ಪಾದಕತೆ ಪ್ರಮಾಣದ ಜತೆಗೆ ಹೆಚ್ಚು ಪರಿಣಾಮಕಾರಿ ಗುಣಮಟ್ಟದ ಉತ್ಪನ್ನಗಳ ಉತ್ಪಾದಿಸುವ ಅಗತ್ಯವಿದೆ ತಿಳಿಸಿದರು.
     ಗ್ರಾಹಕರಿಗೆ ಸುಲಭವಾಗಿ ಅವಶ್ಯಕತೆ ಪೂರೈಸುವ  ಸೃಜನಶೀಲ ಹಾಗೂ ಪ್ರಭಾವಶಾಲಿ ವ್ಯಾಪಾರಿ ಮಾದರಿಗಳ ಮೂಲಕ ಸಂರಕ್ಷಣಾ ಪ್ರಯತ್ನ ಹೆಚ್ಚಿಸಲು ಹೊಸ ಮಾರ್ಗಗಳ ಕಂಡುಕೊಳ್ಳಬೇಕಾಗಿದೆ. ಇದನ್ನೇ ಪ್ಯಾರಿಸ್ ಒಪ್ಪಂದ ಹಾಗೂ ಸಿಒಪಿ 26 ಸ್ಪಷ್ಟಪಡಿಸಿವೆ ಎಂದು ವಿವರಿಸಿದರು.
     ಕುಲಪತಿ ಪ್ರೊ.ಬಿ.ಡಿ. ಕುಂಬಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇವಲ ಪರಿಕಲ್ಪನೆಗಳಿಗಿಂತ ಪರಿಸರ ಪೂರಕವಾದ ಹಸಿರು ಮತ್ತು ಹೆಚ್ಚು ಸಮಾನ ಭವಿಷ್ಯದ ಕಡೆಗೆ ಸ್ಪಷ್ಟವಾದ ಹೆಜ್ಜೆ ಪ್ರತಿನಿಧಿಸಬೇಕು. ವ್ಯವಹಾರಗಳು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ಉಳಿಯುವುದು ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಶಾಶ್ವತ ಪರಂಪರೆ ಉಳಿಸುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.
     ಸುಸ್ಥಿರ ನಾವೀನ್ಯತೆಗಳ ರೋಮಾಂಚನಕಾರಿ ಜಗತ್ತಿನಲ್ಲಿ ಧುಮುಕುವ ಕಾಲ ಇದಾಗಿದೆ. ವ್ಯವಹಾರಗಳಿಗೆ ಹೊಂದಿರುವ ಸಾಮರ್ಥ್ಯ  ಅನ್ವೇಷಿಸಬೇಕಾಗಿದೆ. ಹಳೆಯ ಪರಂಪರಾಗತ ಮಾರುಕಟ್ಟೆ ವ್ಯವಸ್ಥೆ ಉಳಿಸಿಕೊಂಡು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಜಾಗತಿಕವಾಗಿ ಬೆಳೆಯಲು ಯುವಪೀಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
     ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೊಂಡಾಟಿ ವಿಯ್ಯಣ್ಣ ರಾವ್ ದಿಕ್ಸೂಚಿ ಭಾಷಣ ಮಾಡಿ ಹೊಸ ಮಾದರಿಯ ವ್ಯವಸ್ಥೆ ವಿನ್ಯಾಸಗೊಳಿಸಿ, ಸ್ಥಳೀಯವಾಗಿ ತಾಜಾ ಉತ್ಪನ್ನಗಳ ಉತ್ಪಾದಿಸಲು ಅನುವು ಮಾಡಿಕೊಡುವ ಸುಸ್ಥಿರ ಅಭಿವೃದ್ಧಿಗೆ ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನ ಬಳಕೆಯು ಸೂಕ್ತ ಪರಿಹಾರವಾಗುವ ಸಾಧ್ಯತೆ ಇದೆ ಎಂದರು.
     ಹಿರಿಯ ಪ್ರಾಧ್ಯಾಪಕ ಬೆಂಗಳೂರು ಮೌಂಟ್ ಕಾರ್ಮೆಲ್ ಕಾಲೇಜಿನ ಡೀನ್ ಪ್ರೊ.ಎಸ್. ರಮೇಶ, ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಬಿನಾಯ್ ಮ್ಯಾಥ್ಯೂ ವಿವಿಧ ವಿಷಯಗಳ ಕುರಿತು ಮಾತನಾಡಿದರು.
     ಹಣಕಾಸು ಅಧಿಕಾರಿ ಪ್ರೊ.ಆರ್. ಶಶಿಧರ್, ವಾಣಿಜ್ಯ ನಿಕಾಯದ ಡೀನ್ ಪ್ರೊ.ಪಿ. ಲಕ್ಷ್ಮಣ ಇದ್ದರು. ವಾಣಿಜ್ಯ ವಿಭಾಗದ ಅಧ್ಯಕ್ಷ ಡಾ.ಸತ್ಯನಾರಾಯಣ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts