ದಾವಣಗೆರೆ: ನಗರದ ರಾಮ್ ಆ್ಯಂಡ್ ಕೋ ಸರ್ಕಲ್ ಬಳಿ ಅರಮನೆ ಸ್ವೀಟ್ಸ್ ಅಂಗಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭಾನುವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಂಗಡಿಯ ಮಾಲೀಕರಾದ ಬಾಲಕೃಷ್ಣ ಹಾಗೂ ಅಮೋಘ ಮಾತನಾಡಿ, ಅರಮನೆ ಸ್ವೀಟ್ಸ್ ಶೋ ರೂಮ್ನಲ್ಲಿ ವಿವಿಧ ಬಗೆಯ ಅತ್ಯಾಕರ್ಷಕ ಸಿಹಿ ತಿನಿಸುಗಳು, ಬೆಂಗಾಲಿ, ಆಂಧ್ರ ಪ್ರದೇಶದ ಸಿಹಿ ತಿನಿಸುಗಳು ಶುಚಿ, ರುಚಿಯಾಗಿ ಗ್ರಾಹಕರಿಗೆ ದೊರೆಯುತ್ತವೆ ಎಂದು ತಿಳಿಸಿದರು.
ಪ್ರಭಾ ಮಲ್ಲಿಕಾರ್ಜುನ್, ಲಿಂಗಾರೆಡ್ಡಿ, ಸುಜಾತಾ, ಲಿಖಿತಾ, ಶ್ರೇಯಾ ಸೇರಿ ಸಿಬ್ಬಂದಿ ವರ್ಗದವರು ಇದ್ದರು.