More

    ದಾವಣಗೆರೆ ದಕ್ಷಿಣದಲ್ಲಿ ಪಿಯುಸಿ ಕಾಲೇಜಿಗೆ ಶಿಫಾರಸು

    ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪಿಯುಸಿ ಕಾಲೇಜಿಗೆ ಶಿಫಾರಸು ಮಾಡಲಾಗಿದ್ದು ಶೀಘ್ರ ಮಂಜೂರಾತಿ ದೊರೆಯಲಿದೆ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
     ನಗರದ ಹೊಸ ಕಬರಸ್ತಾನದಲ್ಲಿ ಕಾಂಪೌಂಡ್ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಮುಂದಿನ ಶೈಕ್ಷಣಿಕ ವರ್ಷದಿಂದ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗಗಳು ಆರಂಭಗೊಳ್ಳಲಿವೆ ಎಂದರು.
     ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದೇನೆ. ಹಳೇ ಮತ್ತು ಹೊಸ ಕಬರಸ್ತಾನಗಳ ಕಾಂಪೌಂಡ್, ಹೈಟೆಕ್ ಶೌಚಗೃಹ ಮತ್ತು ವಜೂಖಾನ ನಿರ್ಮಿಸಲಾಗುವುದು ಎಂದು ತಿಳಿಸಿದರು.
     ತಂಜಿಮ್ ಕಮಿಟಿಯ ಅಧ್ಯಕ್ಷ ದಾದುಸೇಠ್ ಮಾತನಾಡಿ, ಈ ಭಾಗದಲ್ಲಿನ ಶಾಲೆ ಆವರಣ, ಕಾಂಪೌಂಡ್ ಅಭಿವೃದ್ಧಿಗೊಳಿಸಿ ಕುಡಿವ ನೀರು ಮತ್ತು ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಬೇಕು. ಎಸ್.ಎಸ್.ಎಂ. ನಗರದ ಎ ಬ್ಲಾಕ್ ಉದ್ಯಾನವನ, ಬಾಷಾ ನಗರದ ಸಮುದಾಯ ಭವನವನ್ನು ಅಭಿವೃದ್ಧಿಪಡಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು. ಇದಕ್ಕೆ  ಸ್ಪಂದಿಸಿದ ಶಾಸಕರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕಾರ್ಯರೂಪಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
     ಮಹಾನಗರ ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್, ಜಾಕೀರ್ ಅಲಿ, ಶಫೀಕ್ ಪಂಡಿತ್ ಹಾಗೂ ತಂಜೀಮ್ ಕಮಿಟಿಯ ಸದಸ್ಯರು, ಮುಸ್ಲಿಂ ಸಮಾಜದ ಮುಖಂಡರು ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts