More

    ದತ್ತ ಪೀಠ ಸಾಕಷ್ಟು ಅಭಿವೃದ್ಧಿ ಹೊಂದಲಿದೆ

    ಸಕಲೇಶಪುರ: ಹಿಂದುಗಳ ಪುಣ್ಯಕ್ಷೇತ್ರಗಳ ಮೇಲೆ ಅನ್ಯರ ದಬ್ಬಾಳಿಕೆ ಇನ್ನು ಇತಿಹಾಸ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

    ಮಂಗಳವಾರ ದತ್ತಮಾಲೆ ಧರಿಸಿದ ನಂತರ ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಹಿಂದುಗಳೆ ಬಹುಸಂಖ್ಯಾತರಾಗಿದ್ದರೂ ಒಗ್ಗಟ್ಟಿನ ಕೊರತೆ ಕಾರಣ ಪರಕೀಯರೆಲ್ಲ ನಮ್ಮನ್ನು ಆಳಿದ್ದಲ್ಲದೆ ನಮ್ಮ ಧಾರ್ಮಿಕ ನಂಬಿಕೆಯನ್ನು ದಮನ ಮಾಡಿದರು. ಶತಮಾನಗಳ ಕಾಲ ನಮ್ಮ ಪುಣ್ಯ ಕ್ಷೇತ್ರಗಳಲ್ಲಿ ಅನ್ಯ ದೇವರಿಗೆ ಪೂಜೆ ಸಲ್ಲಿಸುವಂತಾಗಿದೆ. ಆದರೆ, ಇದು ಇನ್ನು ಇತಿಹಾಸ. ಹಿಂದುಗಳು ಜಾಗೃತರಾಗಿದ್ದು, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ದೇಶದೆಲ್ಲೆಡೆ ಅನ್ಯರ ಒಡೆತನದಲ್ಲಿದ್ದ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಸಾಕಷ್ಟು ಹೋರಾಟದ ನಂತರ ಸದ್ಯ ದತ್ತಪೀಠಕ್ಕೆ ಹಿಂದು ಅರ್ಚಕರ ನೇಮಕವಾಗಿದೆ. ಮುಂದಿನ ದಿನಗಳಲ್ಲಿ ಪೀಠ ಸಾಕಷ್ಟು ಅಭಿವೃದ್ಧಿ ಹೊಂದಲಿದೆ ಎಂದರು.

    ಬಿಜೆಪಿ ಮುಖಂಡರಾದ ವಳಲಹಳ್ಳಿ ಅಶ್ವತ್ಥ್, ಅಗ್ನಿ ಸೋಮಶೇಖರ್ ಇತರರಿದ್ದರು. ಪಟ್ಟಣದಿಂದ ನೂರಾರು ಭಕ್ತರು ದತ್ತ ಪೀಠಕ್ಕೆ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts