More

    ಗಲಭೆಯ ನಡುವೆ ನವೀನ್ ಅನ್ನು ಮುಗಿಸೋಕೆ ಸ್ಕೆಚ್​ ರೂಪಿಸಿದ್ರು ಡಿಜೆ ಹಳ್ಳಿ ಗಲಭೆಕೋರರು!

    ಬೆಂಗಳೂರು: ಡಿಜೆಹಳ್ಳಿ ಗಲಭೆಗೆ ಕಾರಣವಾಗಿದ್ದ ಫೇಸ್​ಬುಕ್​ ಕಮೆಂಟ್​ ಮಾಡಿದ್ದ ನವೀನ್ ಅನ್ನು ಮುಗಿಸೋದಕ್ಕೆ ಭಾರಿ ಸ್ಕೆಚ್​ ಸಿದ್ಧವಾಗಿತ್ತು. ಗಲಭೆಯ ನಡುವೆಯೇ ಇದಕ್ಕಾಗಿ ನವೀನ್ ಎಲ್ಲಿದ್ದಾನೆ ಎಂಬ ಹುಡುಕಾಟವನ್ನೂ ಒಂದು ತಂಡ ಮಾಡಿತ್ತು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

    ಗಲಭೆ ಆರಂಭವಾದ ಬೆನ್ನಿಗೇ ಪೊಲೀಸರು ಅವಹೇಳನಕಾರಿ ಫೇಸ್​ಬುಕ್​ ಪೋಸ್ಟ್​ಗೆ ಕಮೆಂಟ್ ಮಾಡಿದ್ದ ನವೀನ್ ವಿರುದ್ಧ ದೂರು ದಾಖಲಾದ ಕೂಡಲೇ ಆತ​ ಎಲ್ಲಿದ್ದಾನೆ ಎಂದು ಹುಡುಕಲಾರಂಭಿಸಿದ್ದರು. ನವೀನ್​ ಅನ್ನು ಬಂಧಿಸುವುದು ಸ್ವಲ್ಪ ತಡವಾಗಿದ್ರೂ ಆತನ ಪ್ರಾಣಕ್ಕೆ ಕಂಟಕ ಇತ್ತು. ಪೊಲೀಸರು ಸ್ಥಳಕ್ಕೆ ತಲುಪಿದ ವೇಳೆ ಗಲಭೆಕೋರರೂ ಸ್ಥಳದಲ್ಲಿ ಗಲಭೆ ಎಬ್ಬಿಸಿದ್ದರು. ನವೀನ್ ಮನೆಗೆ ಕಲ್ಲು ತೂರಾಟ ನಡೆಸಿ ಅಲ್ಲೆಲ್ಲ ಬೆಂಕಿ ಹಚ್ಚೋದಕ್ಕೆ ಆರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ:  ಬಿಡಿಸಲಾಗದ ಕಿಮ್‌ ರಹಸ್ಯ: ಸತ್ತೇ ಹೋದ ಎಂದ ಸರ್ವಾಧಿಕಾರಿ ಮತ್ತೊಮ್ಮೆ ಪ್ರತ್ಯಕ್ಷ! 

    ನವೀನ್ ಬಂಧನ ಸ್ವಲ್ಪ ತಡವಾಗಿದ್ದರೂ ಮನೆಯ ಸಹಿತ ನವೀನ್​ ಸಜೀವ ದಹನ ನಡೆದುಬಿಡುತ್ತಿತ್ತು. ಅವರ ಮನೆಯವರೂ ಪ್ರಾಣ ಕಳೆದುಕೊಳ್ಳಬೇಕಾಗಿ ಬರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)

    ಮಂಚದ​ ಮೇಲೆ ಪವಡಿಸಿದ್ದ ಐದಡಿ ಉದ್ದದ ನಾಗಿಣಿಯ ನೋಡಿ ಬೆಚ್ಚಿಬಿದ್ದ ಮನೆಯೊಡೆಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts