More

    ಜಾಗೃತಿ ಮೂಡಿಸಿ ಹೆಚ್ಚೆಚ್ಚು ನೋಂದಣಿ ಮಾಡಿಸಿ

    ಕಮಲಾಪುರ: ತಾಲೂಕು ಮಟ್ಟದ ಅಧಿಕಾರಿಗಳು ಎಲ್ಲೆಡೆ ಸಂಚರಿಸಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವAತೆ ಪದವೀಧರರಿಗೆ ಜಾಗೃತಿ ಮೂಡಿಸಬೇಕು ಎಂದು ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಸೂಚನೆ ನೀಡಿದರು.

    ತಹಸಿಲ್ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಪದವೀಧರರ ಚುನಾವಣೆಯ ತಾತ್ಕಾಲಿಕ ಪಟ್ಟಿ ಪರಿಶೀಲಿಸಿದ ಅವರು, ಅತೀ ಕಡಿಮೆ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಕೂಡಲೇ ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಹಕ್ಕು ಚಲಾಯಿಸುವಂತೆ ಪದವೀಧರರಿಗೆ ಮಾಹಿತಿ ನೀಡಿ ಎಂದು ತಾಕೀತು ಮಾಡಿದರು.

    ತಹಸೀಲ್ದಾರ್ ಮಹ್ಮದ್ ಮೌಸೀನ್, ಗ್ರೇಡ್-2 ತಹಸೀಲ್ದಾರ್ ಗಂಗಾಧರ ಪಾಟೀಲ್, ಶಿರಸ್ತೆದಾರ ಕಮಲಾಕರ, ಕಂದಾಯ ನಿರೀಕ್ಷಕ ರಘುನಂದನ್ ದ್ಯಾಮಣಿ, ಸಿದ್ದಲಿಂಗ, ಅವಿನಾಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts