More

    ಪ್ರತ್ಯೇಕ ಪ್ರಕರಣ ಕೊರಿಯರ್ ಬಾಯ್ ಸೇರಿ ಇಬ್ಬರ ಹತ್ಯೆ

    ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೊರಿಯರ್ ಬಾಯ್ ಸೇರಿದಂತೆ ಇಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
    ಸ್ನೇಹಿತನನ್ನೇ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೈದಿದ್ದ ನಾಲ್ವರು ಆರೋಪಿಗಳನ್ನು ಹೆಣ್ಣೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
    ಹೊರಮಾವು ನಿವಾಸಿಗಳಾದ ಕಿಶೋರ್, ನಿರ್ಮಲ್, ವೆಂಕಟರಾಜು ಹಾಗೂ ಸಂತೋಷ್ ಬಂಧಿತರು.
    ಗುರುವಾರ ರಾತ್ರಿ ಹೆಣ್ಣೂರು ಠಾಣಾ ವ್ಯಾಪ್ತಿಯ ಬೃಂದಾವನ ಲೇಔಟಿನಲ್ಲಿ ಕೀರ್ತಿ ಅಲಿಯಾಸ್ ಕಿರಿಕ್ ಕೀರ್ತಿ (೨೬) ಎಂಬಾತನನ್ನು ಹತ್ಯೆಗೈಯ್ಯಲಾಗಿತ್ತು.
    ಕೀರ್ತಿ ಹಾಗೂ ಕಿಶೋರ್ ಹಲವು ವರ್ಷಗಳಿಂದ ಸ್ನೇಹಿತರು. ಕೀರ್ತಿ ಪ್ರೀತಿಸಿ ಮದುವೆಯಾಗುವಾಗಲೂ ಸಹ ಕಿಶೋರ್ ಸಹಾಯ ಮಾಡಿದ್ದ. ಆದರೆ ಕೆಲ ತಿಂಗಳ ಹಿಂದೆ ತನ್ನ ದೊಡ್ಡಪ್ಪನ ಮಗನ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಜೈಲು ಸೇರಿದ್ದ ಕೀರ್ತಿಗೆ ಜಾಮೀನು ಪಡೆಯಲು ಕಿಶೋರ್ ಸಹಾಯ ಮಾಡಿರಲಿಲ್ಲವಂತೆ. ಅಷ್ಟೇ ಅಲ್ಲದೇ ಜೈಲಿನಲ್ಲಿದ್ದಾಗ ನೋಡೋಕು ಸಹ ಬರದಿದ್ದ ಕಿಶೋರ್ ಮೇಲೆ ಕೀರ್ತಿ ಸಿಟ್ಟಾಗಿದ್ದ. ಜೈಲಿನಿಂದ ಹೊರ ಬಂದ ಮೇಲೆ ಬಳಿಕ ಅದೇ ಸಿಟ್ಟಿನಲ್ಲೇ ಕಿಶೋರ್‌ಗೆ ಕರೆ ಮಾಡಿದ್ದ ಕೀರ್ತಿ, ಬೆದರಿಕೆ ಹಾಕಿದ್ದ. ಹೀಗಾಗಿ ಗುರುವಾರ ಸಂಜೆ ೭:೩೦ರ ವೇಳೆ ಇಬ್ಬರೂ ರಾಜಿಯಾಗಲು ಸ್ನೇಹಿತರೊಂದಿಗೆ ಬೃಂದಾವನ ಲೇಔಟ್ ಬಳಿ ಸೇರಿದ್ದರು. ಖಾಲಿ ಜಾಗದಲ್ಲಿ ಕುಳಿತು ಮದ್ಯಪಾನ ಮಾಡುವಾಗ ಇಬ್ಬರ ನಡುವೆ ಮತ್ತೆ ಗಲಾಟೆಯಾಗಿದ್ದು, ಈ ವೇಳೆ ಕೀರ್ತಿಯನ್ನು ಮಾರಕಾಸ್ತ್ರದಿಂದ ಹೊಡೆದು ಹತ್ಯೆಗೈದಿದ್ದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೊರಿಯರ್ ಬಾಯ್ ಕೊಲೆ:
    ಮತ್ತೊಂದು ಪ್ರಕರಣದಲ್ಲಿ ಹಲಸೂರಿನ ದೊಮ್ಮಲೂರು ಸಮೀಪದ ಬಿಡಿಎ ಉದ್ಯಾನದ ಬಳಿ ಸತೀಶ್‌ಕುಮಾರ್ (೩೨) ಎಂಬಾತನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.
    ಶಿವಾಜಿನಗರದ ನಿವಾಸಿ ಸತೀಶ್‌ಕುಮಾರ್ ಅವರು ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ ದುಷ್ಕರ್ಮಿಗಳು ಅವರ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಉದ್ಯಾನದ ಸಮೀಪ ರಾತ್ರಿ ಪಾರ್ಟಿ ನಡೆಸುತ್ತಿದ್ದರು. ಅಲ್ಲಿ ಮಾತಿಗೆ ಮಾತು ಬೆಳೆದು ಸತೀಶ್‌ಕುಮಾರ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts