More

    ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಅವಕಾಶ ಕೊಡಿ

    ಚಿತ್ರದುರ್ಗ: ರಾಜ್ಯವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಗೆ ಮತ ನೀಡುವ ಮೂಲಕ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಅವಕಾಶ ನೀಡುವಂತೆ ಪಾರ್ಟಿ ರಾಜ್ಯಜಂಟಿ ಕಾರ‌್ಯದರ್ಶಿ ಬಿ.ಇ.ಜಗದೀಶ್ ಹೇಳಿದರು.

    ನಗರದಲ್ಲಿ ಸೋಮವಾರ ನಗರದ ವಿವಿಧೆಡೆ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ‌್ಯದ ವೇಳೆ ಮಾತನಾಡಿ,ಕಳೆದ ಹಲವು ವರ್ಷಗಳಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸದ ಶಾಸಕರು,ತಮ್ಮ ಅಭಿವೃದ್ಧಿಯನ್ನು ಮಾಡಿಕೊಂಡಿದ್ದಾರೆ,ಭ್ರಷ್ಟಾಚಾರ ಅಧಿಕವಾಗಿದೆ ಎಂದು ಆರೋಪಿಸಿದರು.

    ಕ್ಷೇತ್ರದಲ್ಲಿ ಸೂರಿಲ್ಲದವರು ಸಾವಿರಾರು ಕುಟುಂಬಗಳಿವೆ. ಅವರಿಗೆ ಸೂರು ನೀಡುವುದು ನಮ್ಮ ಕರ್ತವ್ಯವಾಗಿದ್ದು,ಈ ಚುನಾವಣೆಯಲ್ಲಿ ಜೆಸಿಬಿ ಪಕ್ಷಗಳ ಅಭ್ಯರ್ಥಿಗಳನ್ನು ತಿರಸ್ಕರಿಸುವಂತೆ ಮನವಿ ಮಾಡಿದರು. ಜಿಲ್ಲೆಯಲ್ಲಿ 20ಸಾವಿರಕ್ಕೂ ಹೆಚ್ಚು ಜನರು ಪಕ್ಷದ ಸದಸ್ಯತ್ವವನ್ನು ಪಡೆದಿದ್ದಾರೆ ಎಂದರು.

    ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಆರಂಭವಾದ ಸ್ವಚ್ಛತಾ ಕಾರ‌್ಯ,ಗಾಂಧಿಸರ್ಕಲ್,ಬಿಡಿರಸ್ತೆ,ಮೈಸೂರು ಬ್ಯಾಂಕ್ ವೃತ್ತ,ಮಹಾವೀರ ವೃತ್ತ, ವೀರ ವನಿತೆ ಓನಕೆ ಒಬವ್ವ ವೃತ್ತ,ನಿಜಲಿಂಗಪ್ಪ ರಸ್ತೆ ವಿಪಿ ಬಡಾವಣೆ ಪಕ್ಷದ ಕಚೇರಿವರೆಗೆ ನಡೆಯಿತು. ಪಕ್ಷದ ಜಿಲ್ಲಾಧ್ಯಕ್ಷ ಫಾರೂಕ್‌ಅಲಿ,ರಾಧಮ್ಮ, ತಿಪ್ಪೇಸ್ವಾಮಿ,ರವಿ,ಬಸವರಾಜು,ಲೋಹಿತ್, ನವೀನ್, ಆನಂದಪ್ಪ,ದಾಸಣ್ಣ,ಕುಬೇರ್,ಗಣೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts