More

    ಪ್ರತಿ ಚುನಾವಣೆಯಲ್ಲೂ ನನ್ನ ವಿರುದ್ಧ ಷಡ್ಯಂತ್ರ

    ಹುಬ್ಬಳ್ಳಿ: ನನ್ನ ವಿರುದ್ಧ ಪ್ರತಿ ಚುನಾವಣೆಯಲ್ಲಿಯೂ ಷಡ್ಯಂತ್ರ ನಡೆದಿದೆ. ಇದನ್ನೂ ಮೀರಿ ನನಗೆ ಜನರು ಆಶೀರ್ವಾದ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಳೆದ ಬಾರಿ ನ್ಯಾಯ ಅಂತಾ ರಾಹುಲ್ ಗಾಂಧಿ ಘೋಷಣೆ ಮಾಡಿದ್ದರು. ಇವರು ಯಾವತ್ತೂ ಜನರಿಗೆ ನ್ಯಾಯ ಕೊಟ್ಟಿಲ್ಲ ಎಂದರು.
    ಬಡವರಿಗೆ ಏನನ್ನೂ ಕೊಡದೇ ಭ್ರಷ್ಟಾಚಾರ ಮಾಡಿದರು. ಇವರು ಏನೇ ಹೇಳಿದರೂ ಜನರು ನಂಬಲ್ಲ. ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಗೊತ್ತಾಗಿ ಬೇಕಾಬಿಟ್ಟಿ ಘೋಷಣೆ ಮಾಡುತ್ತಿದ್ದಾರೆ. ಪುಲ್ವಾಮಾ ದಾಳಿ, ಅಕ್ಕಿ ಬಗ್ಗೆ ಮಾತಾಡಿದಾಗ ನನಗೆ ಕನಿಕರ ಉಂಟಾಗುತ್ತದೆ. ಪುಲ್ವಾಮಾ ದಾಳಿ ವೇಳೆ ಕ್ಯಾಪ್ಟನ್ ಅಭಿನಂದನ್ ಸಿಕ್ಕಿ ಹಾಕಿಕೊಂಡಾಗ ಕಾಂಗ್ರೆಸ್‌ಗೆ ಖುಷಿಯಾಗಿತ್ತು. ಅವರನ್ನು ಪಾಕಿಸ್ತಾನದವರು ಸಾಯಿಸುತ್ತಾರೆ. ಇದನ್ನು ಪ್ರಧಾನಿ ಮೋದಿ ತಲೆಗೆ ಕಟ್ಟಲು ಕಾಯುತ್ತಿದ್ದರು. ಆದರೆ, ಮೋದಿ ಅವರು ಇದಕ್ಕಿಂತ ಮುಂದೆ ಹೋಗಿ ಎಚ್ಚರಿಕೆ ಕೊಟ್ಟಿದ್ದರು ಎಂದರು.
    ಪುಲ್ವಾಮಾ ಬಗ್ಗೆ ಮಾತನಾಡುವುದು ಯೋಧರಿಗೆ ಮಾಡುವ ಅಪಮಾನ. ಕಾಂಗ್ರೆಸ್ ನೀತಿ ಏನೆಂದರೆ ಭಯೋತ್ಪಾದಕರನ್ನು ಬ್ರದರ್ಸ್ ಎಂದು ಕರೆಯುವುದು. ಅವರ ಗ್ಯಾರಂಟಿಗಳು ಏನಾದವು. ರಾಜಸ್ತಾನ, ಛತ್ತೀಸಗಡದಲ್ಲಿ ಗ್ಯಾರಂಟಿ ಏನಾಯಿತು? ದೇಶದಲ್ಲಿ ಅವರು ಕೇವಲ ಎರಡು ಕಡೆ ಇದ್ದಾರೆ. ಸಚಿವ ಸಂತೋಷ ಲಾಡ್ ಅವರು ಮಂತ್ರಿಗಿರಿ ಉಳಿಸಿಕೊಳ್ಳಲು ಏನೇನೋ ಮಾತನಾಡುತ್ತಾರೆ. ಸೋತರೂ ಅವರ ಮಂತ್ರಿಗಿರಿ ಉಳಿಯಲಿ ಎಂದು ಪ್ರಾರ್ಥಿಸುವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts