More

    ಕ್ಷೇತ್ರದ ಸಮಗ್ರ ಅಭಿವೃದ್ಧಿ ಪರಿಗಣಿಸಿ ಮತನೀಡಿ – ಡಾ. ದೇವಾನಂದ ಚವ್ಹಾಣ

    ವಿಜಯಪುರ: ರಾಜ್ಯದಲ್ಲಿ ಅಧಿಕಾರದಲ್ಲಿರದಿದ್ದರೂ ಅಪಾರ ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿದ್ದು, ಪ್ರಸಕ್ತ ಚುನಾವಣೆಯಲ್ಲಿ ಜೆಡಿಎಸ್‌ಗೆ ಮತ ನೀಡದೇ ಹೋದಲ್ಲಿ ಅಭಿವೃದ್ಧಿ ಎಂಬ ಪದ ಅರ್ಥ ಕಳೆದುಕೊಳ್ಳಲಿದೆ. ಹೀಗಾಗಿ ಅಭಿವೃದ್ಧಿ ಆಧರಿಸಿ ಮತ್ತೊಮ್ಮೆ ಜೆಡಿಎಸ್‌ಗೆ ಮತ ನೀಡಬೇಕೆಂದು ನಾಗಠಾಣ ಶಾಸಕ ಡಾ. ದೇವಾನಂದ ಚವ್ಹಾಣ ಹೇಳಿದರು.

    ನಾಗಠಾಣ ಕ್ಷೇತ್ರದ ಶಿರಾಡೋಣ, ಮಣಂಕಲಗಿ, ಲೋಣಿ ಬಿಕೆ ಗ್ರಾಮಗಳಲ್ಲಿ ಶನಿವಾರ ಪ್ರಚಾರ ಸಂದರ್ಭ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಬರಮಾಡಿಕೊಂಡು ಮಾತನಾಡಿದ ಅವರು, ‘ಮಾಡಿದ್ದೇನೆಂಬುದು ಮನದಲ್ಲಿ ನುಡಿದರೆ ಏಡಿಸಿ ಕಾಡಿತ್ತು ನೋಡಾ ಶಿವನ ಡಂಗುರ’ ಎಂಬ ಶರಣರ ವಾಣಿಯಂತೆ ಮಾಡಿದ್ದನ್ನು ಹೇಳಿಕೊಳ್ಳುವ ಜಾಯಮಾನ ನನ್ನದಲ್ಲ. ಆದರೆ, ಇಂದು ಚುನಾವಣೆ ಮಾಡಿರುವ ಕಾರ್ಯಗಳನ್ನು ಪುನರುಚ್ಚರಿಸುವಂತೆ ಮಾಡಿದೆ ಎನ್ನುತ್ತಲೇ ತಮ್ಮ ಪ್ರಗತಿ ವಿವರ ಬಿಚ್ಚಿಟ್ಟರು.

    ಸಂಕಷ್ಟದ ಸಮಯದಲ್ಲಿ ನೆರವಾಗಿದ್ದೇನೆ. ಮಹಾಪೂರ ಬಂದಾಗ ಸರ್ಕಾರದ ಸಹಾಯಧನ ಒದಗಿಸಿದ್ದೇನೆ. ಶುಭ-ಅಶುಭ ಯಾವುದೇ ಕಾರ್ಯಗಳಿದ್ದರೂ ಜನರೊಂದಿಗೆ ಇದ್ದೇನೆ. ಯಾವುದೇ ಜಾತಿ, ಧರ್ಮ ಬೇಧಭಾವ ಮಾಡದೆ ಎಲ್ಲರೊಂದಿಗೆ ಒಟ್ಟಾಗಿ ಸಾಗಿದ್ದೇನೆ. ಜನಪರ ಆಡಳಿತ ನೀಡಿರುವ ಆತ್ಮತೃಪ್ತಿ ಇದೆ. ಇದೇ ಭರವಸೆ ಮೇಲೆ ಮತಯಾಚನೆಗೆ ಆಗಮಿಸುತ್ತಿದ್ದು, ಮತ್ತೊಮ್ಮೆ ಆಶೀರ್ವದಿಸುವ ವಿಶ್ವಾಸವಿದೆ ಎಂದರು.

    ಮುಖಂಡರಾದ ಶಿವಶರಣ ಜತ್ತಿ, ರುದ್ರೇಶ ಖೈನೂರ, ಜಟ್ಟೆಪ್ಪ ಜತ್ತಿ, ಮಲ್ಲಿಕಾರ್ಜುನ ಮಾಳಬಾಗಿ, ರುದ್ರೇಶ ಬನಸೋಡೆ, ಪ್ರಕಾಶ ಬಿರಾದಾರ, ಸಂದೀಪ ಬೆಳ್ಳಿ, ಚಂದ್ರಕಾಂತ ಬನಸೋಡೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts